ಶಿರಸಿ : ಶ್ರೀಗಂಧ ಕಟ್ಟಿಗೆಯನ್ನ ಕಳ್ಳಸಾಗಣೆ ಮಾಡುತ್ತಿದ್ದ ಇಬ್ಬರನ್ನು ಮಾಲು ಸಮೇತ ಶಿರಸಿ ತಾಲೂಕಿನ ಬನವಾಸಿಯಲ್ಲಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಮಹೇಶ್ ಗುಡಿಗಾರ(48), ಗಣೇಶ ಗುಡಿಗಾರ(50) ಎಂಬುವವರನ್ನು ಬಂಧಿತರಾಗಿದ್ದು, ಫೀರ್ ಖಾನ್ ಹಾಗೂ ಶಬಾನಾ ಫೀರ್ ಖಾನ್ ಚಿಕ್ಕಜಂಬೂರು ಮೂಲದ ವ್ಯಕ್ತಿಗಳು ಪರಾರಿಯಾದವರು.
ಸೊರಬದಿಂದ ಬನವಾಸಿ ಕಡೆಗೆ ಸ್ವಿಪ್ಟ್ ಕಾರಿನಲ್ಲಿ ಗಂಧದ ತುಂಡುಗಳನ್ನು ಹಾಕಿಕೊಂಡು ಶಿರಸಿ ಕಡೆಗೆ ಬರುತಿದ್ದರು
ಖಚಿತ ಮಾಹಿತಿ ಪಡೆದ ಬನವಾಸಿ ಪೊಲೀಸರು ಕಾರನ್ನು ತಡೆದು ತಪಾಸಣೆ ಮಾಡಿದ್ದಾರೆ. ಈ ವೇಳೆ ಇಬ್ಬರು ಆರೋಪಿಗಳು ಪರಾರಿಯಾಗಿದ್ದು ಇಬ್ಬರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಬಂಧಿತರಿಂದ ಸುಮಾರು 2 ಲಕ್ಷ ರೂಪಾಯಿ ಮೌಲ್ಯದ 6 ಗಂಧದ ತುಂಡುಗಳನ್ನು ಹಾಗೂ ಸಾಗಾಣಿಕೆಗೆ ಬಳಸಿದ ಸ್ವಿಫ್ಟ್ ಕಾರನ್ನು ಸಹ ವಶಪಡೆಯಲಾಗಿದ್ದು, ಬನವಾಸಿ ಪೊಲೀಸರು ತನಿಖೆ ನಡೆಸಿದ್ದಾರೆ.