ಪಾರ್ಶ್ವವಾಯು ಪೀಡಿತರಾಗಿದ್ದ ರಿಯಾದ್ ಉದ್ಯೋಗಿ ವಿಮಾನದ ಮೂಲಕ ತಾಯ್ನಾಡಿಗೆ. ಮಾನವೀಯತೆ ಮೆರೆದ ವೈದ್ಯರ ಮತ್ತು ಸಮಾಜಸೇವಕ ಬಳಗ.

Source: SO News | By Laxmi Tanaya | Published on 24th March 2021, 10:30 PM | National News | Gulf News |

ಮಂಗಳೂರು : ಕಳೆದ ಮೂರುವರೆ ತಿಂಗಳಿಂದ ಪಾರ್ಶ್ವವಾಯು ಪೀಡಿತರಾಗಿ  ಹಾಸಿಗೆ ಹಿಡಿದಿದ್ದ ಕುಂದಾಪುರ ಮೂಲದ ವ್ಯಕ್ತಿಯೊಬ್ಬರನ್ನ ಕರಾವಳಿಯ ವೈದ್ಯರು ಮತ್ತು ಸಮಾಜ ಸೇವಕರು ರಾಜ್ಯಕ್ಕೆ ತಂದು ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ.

ಕುಂದಾಪುರದ ಚಂದ್ರಶೇಖರ ಪಾಂಡುರಂಗ ಸಾರಂಗ ಅನಾರೋಗ್ಯಕ್ಕೀಡಾಗಿ ಹಾಸಿಗೆ ಹಿಡಿದವರು. ಕಳೆದ 35 ವರ್ಷಗಳಿಂದ ಇವರು ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುತ್ತಿದ್ದರು. ಡಿಸೆಂಬರ್ 5ರಂದು ಪಾರ್ಶ್ವವಾಯುವಿಗೆ ಒಳಗಾಗಿದ್ದರಿಂದ ಯಾವುದೇ ಅಂಗಾಗಗಳು ಕೆಲಸ ನಿರ್ವಹಿಸದೇ, ಕೇವಲ ಕಣ್ಸನ್ನೆ ಮೂಲಕ ತಿಳಿಸುತ್ತಿದ್ದಾರೆ.

ನಾಲ್ಕು ವರ್ಷದ ಹಿಂದೆ ಭಟ್ಕಳ ಮೂಲದ ಅಬುಬಕರ್ ಎಂಬುವವರು ಅನಾರೋಗ್ಯಕ್ಕೀಡಾದಾಗ ಭಟ್ಕಳ ಮತ್ತು ಮುರ್ಡೇಶ್ವರ ಜನರ ಸಹಾಯದಿಂದ ದುಬೈನಿಂದ ಕರೆತರಲಾಗಿತ್ತು. 

ಭಾರತೀಯ ರಾಯಭಾರಿ ಕಚೇರಿ ಮೂಲಕ ಹಲವು ಬಾರೀ ಪ್ರಯತ್ನಿಸಿದರೂ ಪ್ರಯೋಜನವಾಗಿರಲಿಲ್ಲ. ಬುಧವಾರ ನಸುಕಿನ ಜಾವ ಎರಡು ಗಂಟೆಗೆ ದಮಾಮ್ ನಿಂದ ಏರ್ ಇಂಡಿಯಾ ಎಕ್ಸಪ್ರೆಸ್ ವಿಮಾನದ ಮೂಲಕ ಕರೆತರಲಾಗಿದೆ. ಪಡುಬಿದ್ರಿಯ ಡಾ ಬೇಕಲ್ ಜೊತೆ ಕರೆತರಲಾಗಿದೆ.

ಸದ್ಯ ಚಂದ್ರಶೇಖರ್ ಸಾರಂಗ ಅವರನ್ನ ಎಜೆ  ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಂಗಳೂರಿನ ಬಜ್ಪೆ ವಿಮಾನ ನಿಲ್ದಾಣಕ್ಕೆ ಬಂದ ಅವರನ್ನ ದಂತ ವೈದ್ಯರಾದ ಡಾ ಜಹೀರ್ ಕೋಲಾ, ವೇಲ್ಪೆರ್ ಆಸ್ಪತ್ರೆಯ ಅಬ್ದುಲ್  ಅಲಾ ಮುಂತಾದವರು ಉಪಸ್ಥಿತರಿದ್ದರು.

ಸೌದಿಯಲ್ಲಿ ವಾಕಸ್ ರುಕ್ನುದ್ದಿನ್, ಡಾ. ವಾಸೀಮ್ ಮನಿ, ಪೌಜಾನ್ ಬಿದ್ಕೊಲ್,  ಇಸ್ತಿಯಾಕ್ ಅರ್ಮರ್, ಡಾ. ಬೇಕಲ್ ಮತ್ತು ಇತರರು ಕರ್ನಾಟಕಕ್ಕೆ ಕರೆತರಲು ಸಹಾಯ  ಮಾಡಿದ್ದರು.

ರಿಯಾದ್ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸಿದ ಚಂದ್ರಶೇಖರ ಅವರನ್ನ ವಿದೇಶಾಂಗ ಇಲಾಖೆ ಜೊತೆ ಮಾತಾಡಿದರೂ ಕರೆತರಲು ಆಗಿರಲಿಲ್ಲ. ಆದರೆ ದೇವರ ಹಾಗೆ ವೈದ್ಯರ ತಂಡ ಜಾತಿ, ಧರ್ಮ ನೋಡದೇ ತಾಯ್ನಾಡಿಗೆ ತರಲು ಸಹಕಾರಿಯಾಗಿರುವುದನ್ನ ಸಾಯುವವರೆಗೂ ಮರೆಯೋದಿಲ್ಲ ಎಂದು ಸಂಬಂಧಿ ಶರತ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Read These Next

ನಾಮಪತ್ರ ಹಿಂಪಡೆದ ಇಂದೋರ್ ಕಾಂಗ್ರೆಸ್ ಅಭ್ಯರ್ಥಿ; ಅಕ್ಷಯ್ ಕಾಂತಿ ಬಮ್ ಬಿಜೆಪಿ ಸೇರ್ಪಡೆ

ಇಂದೋರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಕ್ಷಯ್ ಕಾಂತಿ ಬಮ್ ಅವರು ತನ್ನ ನಾಮಪತ್ರವನ್ನು ಹಿಂಪಡೆದಿದ್ದಾರೆ ಹಾಗೂ ಬಿಜೆಪಿ ...

ಲೈಂಗಿಕ ಹಗರಣ; ಪ್ರಜ್ವಲ್ ರೇವಣ್ಣರನ್ನು ಮೋದಿ ರಕ್ಷಿಸುತ್ತಿದ್ದಾರೆ; ಕಾಂಗ್ರೆಸ್

ಮಹಿಳೆಯರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪವನ್ನು ಹೊತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣರನ್ನು ಪ್ರಧಾನಿ ನರೇಂದ್ರ ಮೋದಿಯವರು ...

ರಾಜ್ಯದಲ್ಲಿ ಶೇ.69.23 ಮತದಾನ; ಮಂಡ್ಯದಲ್ಲಿ ಗರಿಷ್ಠ ಶೇ.81.48; ಬೆಂಗಳೂರು ಕೇಂದ್ರದಲ್ಲಿ ಕನಿಷ್ಠ ಶೇ.52.81

ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ನಡೆದ ಮೊದಲ ಹಂತದ ಮತದಾನವು ಬಹುತೇಕ ಶಾಂತಿಯುತವಾಗಿ ನೆರವೇರಿತು. ಒಟ್ಟಾರೆ ಶೇ.69.23ರಷ್ಟು ...

ದುಬಾಯಿಯಲ್ಲಿ "ಗಲ್ಫ್ ಕರ್ನಾಟಕೊತ್ಸವ" ಯಶಸ್ವಿ; ಐತಿಹಾಸಿಕ ದಾಖಲೆಗೆ ಸಾಕ್ಷಿಯಾದ ಅನಿವಾಸಿ ಕನ್ನಡಿಗರು

ಕರ್ನಾಟಕದ 21 ಅತ್ಯಂತ್ ಪ್ರಭಾವಶಾಲಿ ವ್ಯಾಪಾರ  ಐಕಾನ್ ಗಳು ಗಲ್ಫ್ ಕರ್ನಾಟಕ ರತ್ನ ಪ್ರಶಸ್ತಿಗಳೊಂದಿಗೆ ಗೌರವಿಸಲಿಟ್ಟರು.