ದಾಂಡೇಲಿ : ಹಳಿಯಾಳ ತಾಲೂಕಿನ ವಿರ್ನೊಲಿ ಬಳಿ ಅಕ್ರಮವಾಗಿ ಮರಳು ತೆಗೆಯುತ್ತಿದ್ದ ಕಾರಣಕ್ಕೆ ಸ್ಥಳಕ್ಕೆ ಹೋದ ಅರಣ್ಯ ಇಲಾಖೆ ಸಿಬ್ಬಂದಿಗಳ ಮೇಲೆ ಹಲ್ಲೆ ಮಾಡಿದ ಘಟನೆ ನಡೆದಿದೆ.
ಗ್ರಾಮದ ಕೃಷ್ಣ ಶೇಡೆಕರ್ ಮತ್ತು ದೇವರಾಜ ಎಂಬುವವರು ಸಂರಕ್ಷಿತಾರಣ್ಯ ಪ್ರದೇಶದಲ್ಲಿ ಇದ್ದಿದ್ದಕ್ಕೆ ಸಿಬ್ಬಂದಿಗಳು ಪ್ರಶ್ನಿಸಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ಅರಣ್ಯ ರಕ್ಷಕರಾದ ಸಂದೀಪ ಗೌಡ ಮತ್ತು ಕೃಷ್ಣ ಅವರಿಗೆ ಗಾಯಗಳಾಗಿವೆ.
ಘಟನೆಗೆ ಸಂಬಂಧಿಸಿದಂತೆ ದಾಂಡೇಲಿ ಗ್ರಾಮೀಣ ಠಾಣೆಯಲ್ಲಿ ಅರಣ್ಯ ಇಲಾಖೆ ಮತ್ತು ಗ್ರಾಮಸ್ಥರು ಪರಸ್ಪರ ದೂರು ದಾಖಲಿಸಿದ್ದಾರೆ.