ಗೋಕರ್ಣ : ತದಡಿ ಬಂದರಿನಿಂದ ಮೀನುಗಾರಿಕೆಗೆ ಹೋದ ಯಾಂತ್ರಿಕ ದೋಣಿ ಅಂಕೋಲಾದ ಬೇಲೇಕೇರಿ ಸಮೀಪದ ಸಮುದ್ರದಲ್ಲಿ ಮುಳುಗಿದ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ.
ಶಂಕರ ಹರಿಕಾಂತ ಎಂಬುವವರಿಗೆ ಸೇರಿದ ಶಾಂತಿಕಾ ಹೆಸರಿನ ಬೋಟ್ ಮುಳುಗಡೆಯಾಗಿದೆ. ದೇವಿಕೃಪಾ ಬೋಟ್ ನವರು ಆರು ಜನರ ರಕ್ಷಿಸಿ ಜಾರವಾರದ ಮುದಗಾ ಬಂದರಿಗೆ ಮರೆ ತಂದಿದ್ದಾರೆ.
ಶಂಕರ ಬೀರಪ್ಪ ಹರಿಕಂತ್ರ,
ಮನೋಜ ಶಂಕರ ಹರಿಕಂತ್ರ,
ದೇವದಾಸ ನಾಗಪ್ಪ ಹರಿಕಂತ್ರ,
ಮಹೇಂದ್ರ ಶಂಕರ ನಾಯ್ಕ,
ಬೀರು ಹನುಮಂತ ಗೌಡ ಹಾಗೂ
ಬೀರಾ ಮಾಸ್ತಿ ಗೌಡ ರಕ್ಷಣೆಗೊಳಗಾದವರು.
ಉತ್ತರಕನ್ನಡ ಜಿಲ್ಲಾ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ರಾಜು ತಾಂಡೇಲ, ಕರಾವಳಿ ಕಾವಲು ಪಡೆ ಸಿಪಿಐ ನಿಶ್ಚಲಕುಮಾರ, ಮೀನುಗಾರಿಕೆ ಸಹಾಯಕ ಅಧಿಕಾರಿ ವಿಧ್ಯಾದರ ಹರಿಕಂತ್ರ ಈ ಸಂದರ್ಭದಲ್ಲಿ ಹಾಜರಾಗಿ ಮೀನುಗಾರರ ಯೋಗಕ್ಷೇಮ ವಿಚಾರಿಸಿದ್ದಾರೆ. ಘಟನೆಯಲ್ಲಿ ಲಕ್ಷಾಂತರ ರೂ. ಹಾನಿಯಾಗಿದೆ.