ಬೇಲೇಕೇರಿ ಸಮೀಪ ಅರಬ್ಬಿ ಸಮುದ್ರದಲ್ಲಿ ಯಾಂತ್ರಿಕ ಬೋಟ್ ಮುಳುಗಡೆ. ಆರು ಮೀನುಗಾರರ ರಕ್ಷಣೆ.

Source: SO News | By Laxmi Tanaya | Published on 5th August 2021, 9:58 PM | Coastal News | Don't Miss |

ಗೋಕರ್ಣ : ತದಡಿ ಬಂದರಿನಿಂದ ಮೀನುಗಾರಿಕೆಗೆ ಹೋದ ಯಾಂತ್ರಿಕ ದೋಣಿ ಅಂಕೋಲಾದ ಬೇಲೇಕೇರಿ ಸಮೀಪದ ಸಮುದ್ರದಲ್ಲಿ‌ ಮುಳುಗಿದ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ.

ಶಂಕರ ಹರಿಕಾಂತ ಎಂಬುವವರಿಗೆ ಸೇರಿದ ಶಾಂತಿಕಾ ಹೆಸರಿನ ಬೋಟ್ ಮುಳುಗಡೆಯಾಗಿದೆ.  ದೇವಿಕೃಪಾ ಬೋಟ್ ನವರು  ಆರು ಜನರ ರಕ್ಷಿಸಿ ಜಾರವಾರದ ಮುದಗಾ ಬಂದರಿಗೆ ಮರೆ ತಂದಿದ್ದಾರೆ.

ಶಂಕರ ಬೀರಪ್ಪ ಹರಿಕಂತ್ರ, 
ಮನೋಜ ಶಂಕರ ಹರಿಕಂತ್ರ, 
ದೇವದಾಸ ನಾಗಪ್ಪ ಹರಿಕಂತ್ರ,
ಮಹೇಂದ್ರ  ಶಂಕರ ನಾಯ್ಕ,
ಬೀರು ಹನುಮಂತ ಗೌಡ ಹಾಗೂ
ಬೀರಾ ಮಾಸ್ತಿ ಗೌಡ ರಕ್ಷಣೆಗೊಳಗಾದವರು.
 
ಉತ್ತರಕನ್ನಡ ಜಿಲ್ಲಾ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ  ರಾಜು ತಾಂಡೇಲ, ಕರಾವಳಿ ಕಾವಲು ಪಡೆ ಸಿಪಿಐ ನಿಶ್ಚಲಕುಮಾರ, ಮೀನುಗಾರಿಕೆ ಸಹಾಯಕ ಅಧಿಕಾರಿ  ವಿಧ್ಯಾದರ ಹರಿಕಂತ್ರ ಈ ಸಂದರ್ಭದಲ್ಲಿ ಹಾಜರಾಗಿ ಮೀನುಗಾರರ ಯೋಗಕ್ಷೇಮ‌ ವಿಚಾರಿಸಿದ್ದಾರೆ. ಘಟನೆಯಲ್ಲಿ ಲಕ್ಷಾಂತರ ರೂ. ಹಾನಿಯಾಗಿದೆ.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...