116 ಮಂದಿಯ ಬಂಧನ: ಸಿಎಂ ಖಟ್ಟರ್; ಎಲ್ಲರನ್ನೂ ರಕ್ಷಿಸಲು ಪೊಲೀಸರಿಂದ ಸಾಧ್ಯವಿಲ್ಲ
ಚಂಡಿಗಡ: ರಾಜ್ಯದಲ್ಲಿ ಭುಗಿಲೆದ್ದ ಕೋಮು ಹಿಂಸಾಚಾರದಲ್ಲಿ ಇಬ್ಬರು ಗೃಹ ರಕ್ಷಕ ದಳದ ಸಿಬ್ಬಂದಿ ಸೇರಿದಂತೆ 6 ಮಂದಿ ಮೃತಪಟ್ಟಿದ್ದಾರೆ. ಹಿಂಸಾಚಾರದ ಘಟನೆಗಳಿಗೆ ಸಂಬಂಧಿಸಿ 116 ಮಂದಿಯನ್ನು ಬಂಧಿಸಲಾಗಿದೆ ಎಂದು ಹರ್ಯಾಣದ ಮುಖ್ಯಮಂತ್ರಿ ಮನೋಹ ಲಾಲ್ ಖಟ್ಟರ್ ಬುಧವಾರ ಹೇಳಿದ್ದಾರೆ. ನೂಡ್ನಲ್ಲಿ ಘರ್ಷಣೆಗಳನ್ನು ನಿಯಂ ಇಣಕ್ಕೆ ತಂದ ಬಳಿಕ ಇತರೆಡೆ ಹಲವು ಹಿಂಸಾಚಾರದ ಘಟನೆಗಳು ನಡೆದಿವೆ ಎಂದು ಅವರು ತಿಳಿಸಿದ್ದಾರೆ.
ಸೌಹಾರ್ದ ಇಲ್ಲದಿದ್ದರೆ, ಭದ್ರತೆ ಇರಲಾರದು. ಪರಸ್ಪರ ವಿರೋಧಿಸುತ್ತಿದ್ದರೆ ಅಲ್ಲಿ ಭದ್ರತೆ ಇರಲಾರದು. ಪ್ರತಿಯೊಬ್ಬರನ್ನು ಪೊಲೀಸರು, ಸೇನೆ, ನಾನು ಅಥವಾ ನೀವು ರಕ್ಷಿಸಲು ಸಾದ್ಯವಿಲ್ಲ. ಮನೋಹರ್ ಲಾಲ್ ಖಟ್ಟರ್ (ಹರ್ಯಾಣ ಮುಖ್ಯಮಂತ್ರಿ) |
ಗಾಯಗೊಂಡವರನ್ನು ಗುರುಗ್ರಾಮದ ಮೆಡಂಟಾ ಹಾಗೂ ನೂಡ್ನ ನಲ್ದಾರ್ನಲ್ಲಿರುವ ಆಸ್ಪತ್ರೆ ಸೇರಿದಂತೆ ವಿವಿಧ ಆಸ್ಪತ್ರೆಗಳಲ್ಲಿ ದಾಖಲಿಸಲಾಗಿದೆ. 116 ಮಂದಿಯನ್ನು ಬಂಧಿಸಲಾಗಿದೆ. ಇತರ ಆರೋಪಿಗಳ ಬಂಧನಕ್ಕೆ ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದು ಅವರು ಹೇಳಿದ್ದಾರೆ.
ಆರೋಪಿಗಳನ್ನು ಗುರುತಿಸಲಾಗುತ್ತಿದೆ ಎಂದು ಹೇಳಿದ ಅವರು, ತಪ್ಪೆಸಗಿದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
ರಾಜ್ಯದಲ್ಲಿ ಹರ್ಯಾಣ ಪೊಲೀಸ್ ಸಿಬ್ಬಂದಿ ಅಲ್ಲದೆ, ಕೇಂದ್ರ ಭದ್ರತಾ ಪಡೆಗಳ 20 ಕಂಪೆನಿಗಳನ್ನು ನಿಯೋಜಿಸಲಾಗಿದೆ. ಪಲ್ಟಾಲ್ನಲ್ಲಿ 3, ಗುರುಗ್ರಾಮದಲ್ಲಿ 2, ಫರೀದಾಬಾದ್ನಲ್ಲಿ 1 ಹಾಗೂ ನೂಹ್ ನಲ್ಲಿ 14 ಕಂಪೆನಿಗಳನ್ನು ನಿಯೋಜಿಸಲಾಗಿದೆ ಎಂದು ಹೇಳಿರುವ ಕಟ್ಟರ್, ಶಾಂತಿ ಕಾಪಾಡುವಂತೆ ಜನರಲ್ಲಿ ಮನವಿ ಮಾಡಿದ್ದಾರೆ.