ಮುಂಡಗೋಡ : ಚಾಲಕನ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ ಹಳ್ಳದಲ್ಲಿ ಬಿದ್ದ ಪರಿಣಾಮ ಟ್ರ್ಯಾಕ್ಟರನಲ್ಲಿದ್ದ ವ್ಯಕ್ತಿ ಮೃತಪಟ್ಟ ಘಟನೆ ತಾಲೂಕಿನ ಮೈನಳ್ಳಿ ಗ್ರಾಮದ ಕುದರೆನಾಳ ಬ್ರೀಡ್ಜ್ ಹತ್ತಿರ ಸಂಭವಿಸಿದೆ.
ಮೃತ ವ್ಯಕ್ತಿಯನ್ನು ಪಟ್ಟಣದ ಪಟ್ಟಣದ ಕಂಬಾರಗಟ್ಟಿಯ ನಿವಾಸಿ ಹಜರತ್ಸಾಬ ಕಬ್ಬನೂರ(ಕಂಟ್ರಾಕ್ಟರ ನಜೀರ ಕಬನೂರ ಸಹೋದರ) ಎಂದು ತಿಳಿದುಬಂದಿದೆ.
ಈರಣ್ಣ ಕೆಳಗಿನಮನಿ ಎಂಬುವವರು ಟ್ರ್ಯಾಕ್ಟರ್ ಚಲಾಯಿಸುತ್ತಿದ್ದರು ಎಂದು ಹೇಳಲಾಗಿದೆ ಈತನು ಮುಂಡಗೋಡದಿಂದ ಯಲ್ಲಾಪುರ ರಸ್ತೆಯಲ್ಲಿ ವೇಗವಾಗಿ, ನಿಷ್ಕಾಳಜಿತನದಿಂದ ಟ್ರ್ಯಾಕ್ಟರ್ ಚಾಲನೆ ಮಾಡಿಕೊಂಡು ಹೋಗುತ್ತಿರುವಾಗ ನಿಯಂತ್ರಣ ತಪ್ಪಿ ಮೈನಳ್ಳಿ ಗ್ರಾಮದ ಕುದುರೆನಾಳ ಬ್ರಿಡ್ಜ್ ಬಳಿ ಹಳ್ಳದಲ್ಲಿ ಟ್ರ್ಯಾಕ್ಟರ್ ಅಪಘಾತಪಡಿಸಿದ್ದಾನೆ.
ನನ್ನ ಸಹೋದರನ ಸಾವಿಗೆ ಈರಣ್ಣ ಕೆಳಗಿನಮನಿಯೇ ಕಾರಣನಾಗಿದ್ದಾನೆ ಎಂದು ಮೃತನ ಸಹೋದರ ನಜೀರ ಕಬ್ಬನೂರ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾನೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆಕ ಕೈಗೊಂಡಿದ್ದಾರೆ