ಚೆನ್ನೈ: ತಮಿಳುನಾಡು ಸರ್ಕಾರ ಆಯೋಜಿಸಿದ್ದ ಜಲ್ಲಿಕಟ್ಟು ಸ್ಫರ್ಧೆಯಲ್ಲೇ ಅವಘಡ ಸಂಭವಿಸಿದ್ದು, ಗೂಳಿ ಹೊಡೆತಕ್ಕೆ ಸಿಕ್ಕಿ ಇಬ್ಬರು ಮೃತಪಟ್ಟಿದ್ದಾರೆ.
ತಮಿಳುನಾಡಿನ ಪುದುಕೊಟೈನಲ್ಲಿ ನಡೆದ ಜಲ್ಲಿಕಟ್ಟಿನಲ್ಲಿ ದುರ್ಘಟನೆ ಸಂಭವಿಸಿದೆ. ಹೋರಿ ಬೆನ್ನಟ್ಟುವ ವೇಳೆ ರಾಜಾ ಎಂಬಾತನ ಎದೆಗೆ ಇರಿದಿದ್ದರೆ, ಮೋಹನ್ ಎಂಬಾತನ ಪೃಷ್ಠಕ್ಕೆ ಗೂಳಿ ಇರಿದಿದೆ.
ಮೂರು ವರ್ಷಗಳ ಬಳಿಕ ಇಬ್ಬರ ಬಲಿಯೊಂದಿಗೆ ಜಲ್ಲಿಕಟ್ಟು ಆರಂಭಗೊಂಡಿದ್ದು, ಆರಂಭದಲ್ಲೇ ವಿಘ್ನ ಸಂಭವಿಸಿದೆ. ಜಲ್ಲಿಕಟ್ಟು ನಿಷೇಧಕ್ಕೆ ಸಂಬಂಧಿಸಿದ ಅರ್ಜಿ ವಿಚಾರಣೆ ಸುಪ್ರೀಂನಲ್ಲಿ ನಡೆಯುತ್ತಿರುವಾಗಲೇ ತಮಿಳುನಾಡು ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿ ಜಲ್ಲಿಕಟ್ಟನ್ನು ಮತ್ತೆ ಆರಂಭಿಸಿತ್ತು. ಆದರೆ ಈಗ ಇಬ್ಬರು ಮೃತಪಟ್ಟಿದ್ದು ಕೋರ್ಟ್ ಈ ಪ್ರಕರಣವನ್ನು ಹೇಗೆ ಸ್ವೀಕರಿಸುತ್ತದೆ ಎನ್ನುವ ಕುತೂಹಲ ಈಗ ಹೆಚ್ಚಾಗಿದೆ.