ಚಿಂತಾಮಣಿ: ರಾಷ್ಟ್ರೀಯ ಜನತಾ ದಳ ಕರ್ನಾಟಕ (ಮೈನಾರ್ಟಿ) ರಾಜ್ಯ ಉಪಾಧ್ಯಕ್ಷರನ್ನಾಗಿ ಚಿಂತಾಮಣಿ ನಗರದ ಕೆ.ಆರ್.ಬಡಾವಣೆಯ ತನ್ವೀರ್ ಅಲಿ ಬೇಗ್ರನ್ನು ಆರ್.ಜೆ.ಡಿ.ಯ ರಾಜ್ಯಾ ಧ್ಯಕ್ಷ ಜಿ.ಯಾಕುಬ್ ನೇಮಿಸಿ ಆದೇಶ ಹೊರಡಿಸಿದ್ದಾರೆ.
ರಾಜ್ಯದಲ್ಲಿ ಮೈನಾರ್ಟಿ ಜನಾಂಗಕ್ಕೆ ಕೇಂದ್ರ ಮತ್ತು ರಾಜ್ಯ ಸರಕಾರಗಳಿಂದ ಸಿಗಬಹು ದಾದ ಸವಲತ್ತುಗಳನ್ನು ಸಮರ್ಪಕವಾಗಿ ತಲುಪಿಸುವುದು ಮತ್ತು ಆರ್.ಜೆ.ಡಿ. ಪಕ್ಷದ ಸಂಘ ಟನೆಗಾಗಿ ದುಡಿಯುವುದರ ಜೊತೆಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಲಾಲೂ ಪ್ರಸಾದ್ ಯಾದ ವ್ರ ಸಲಹೆ, ಸೂಚನೆಗಳನ್ನು ಪಾಲಿಸಲು ಬದ್ಧರಾಗಿರುವಂತೆ ಆದೇಶದಲ್ಲಿ ಸೂಚಿಸಿದ್ದಾರೆ.