ಪಡಿತರ ಹಾಗೂ ಸೀಮೆ ಎಣ್ಣೆ ಕೂಪನ್ ಪಡೆಯಲು ಹಣ ನೀಡಬೇಡಿ- ಕೃಷ್ಣಾರೆಡ್ಡಿ.
ಚಿಂತಾಮಣಿ: ಸೈಬರ್ ಕೇಂದ್ರಗಳಲ್ಲಿ ಪಡಿತರ ಹಾಗೂ ಸೀಮೆ ಎಣ್ಣೆ ಟೋಕನ್ ಪಡೆಯಲು ಬಡವರಿಂದ ಯಾವುದೇ ರೀತಿಯ ಹಣವನ್ನು ಪಡೆಯಬಾರದೆಂದು ಶಾಸಕ ಜೆ.ಕೆ.ರೆಡ್ಡಿ ತಿಳಿಸಿದ್ದಾರೆ.
ಈ ಕುರಿತಂತೆ ನಗರದಲ್ಲಿ ಪಡಿತರ ಹಾಗೂ ಸೀಮೆ ಎಣ್ಣೆ ಪಡೆಯಲು ನೀಡುತ್ತಿರುವ ಕೋಪನ್ ಗಾಗಿ ಹಣ ತೆರುವಂತಾಗಿದೆ ಎಂಬ ಸಾರ್ವಜನಿಕರ ದೂರುಗಳಿಗೆ ಸಂಬಂಧಿಸಿದಂತೆ ಶಾಸಕ ರೆಡ್ಡಿ ಈ ಮೇಲಿನಲ್ಲಿ ಪ್ರತಿಕ್ರಿಯಿಸಿದ್ದು ಯಾರೂ ಕೂಡ ಟೋಕನ್ ಪಡೆಯಲು ಹಣ ನೀಡುವ ಅವಶ್ಯಕತೆಯಿಲ್ಲ. ಸರ್ಕಾರವೇ ಆಯಾ ಕೇಂದ್ರಗಳಿಗೆ ಹಣ ನೀಡುತ್ತಿದೆ ಎಂದು ತಿಳಿಸಿದ್ದಾರೆ. ಈ ಕುರಿತಂತೆ ಜಿಲ್ಲಾದಿಕಾರಿಗಳು, ಜಿಲ್ಲಾ ಆಹಾರ ಉಪನಿರ್ದೇಶಕರು ಹಾಗೂ ತಹಸಿಲ್ದಾರ್ ರವರ ಗಮನಕ್ಕೆ ತಂದಿದ್ದು, ಇನ್ನೂ ಮುಂದೆ ಯಾರು ಸಹ ಪಡಿತರ ಹಾಗೂ ಸೀಮೆ ಎಣ್ಣೆ ಕೂಪನ್ ಗಳನ್ನು ಪಡೆಯಲು ಸೈಬರ್ ಕೇಂದ್ರಗಳಿಗೆ ಯಾವುದೇ ಕಾರಣಕ್ಕೂ ಹಣ ನೀಡಬಾರದು ಹಾಗೇನಾದರೂ ಹಣ ಕೇಳಿದರೆ ತಮ್ಮ ಗಮನಕ್ಕೆ ತರುವಂತೆ ಶಾಸಕ ಜೆ.ಕೆ ಕೃಷ್ಣಾರೆಡ್ದಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.