ಭಟ್ಕಳ: ಇಲ್ಲಿನ ಭಟ್ಕಳ ಎಜುಕೇಶನ ಟ್ರಸ್ಟ್ ಬೋಧಕ ಬೋಧಕೇತರ ವೃಂದದವರು ತಮ್ಮ ಒಂದು ದಿನದ ವೇತನವನ್ನು ಸಂತ್ರಸ್ತರಿಗೆ ನೀಡುವುದರ ಮೂಲಕ ಸಾಮಾಜಿಕ ಹಾಗೂ ಮಾನವೀಯ ಕಳಕಳಿಯನ್ನು ತೋರ್ಪಡಿಸಿದ್ದಾರೆ.
ಅತಿವೃಷ್ಟಿಯಿಂದ ತತ್ತರಿಸುತಿರುವ ಕೊಡಗು ಜಿಲ್ಲೆಗೆ ಪರಿಹಾರವಾಗಿ ಭಟ್ಕಳ ಎಜುಕೇಶನ ಟ್ರಸ್ಟ್ ಬೋಧಕ ಬೋಧಕೇತರ ವೃಂದದವರು ತಮ್ಮ ಒಂದು ದಿನದ ವೇತನವನ್ನು ನೀಡುವುದರ ಮೂಲಕ ಸಂತ್ರಸ್ತರಿಗೆ ನೆರವನ್ನು ನೀಡಿದರು.
ಈ ಸಂದರ್ಭದಲ್ಲಿ ಟ್ರಸ್ಟನ ಅಧ್ಯಕ್ಷರಾದ ಡಾ. ಸುರೇಶ ವಿ ನಾಯಕ, ಟ್ರಸ್ಟಿ ಮ್ಯಾನೇಜರ್ ರಾಜೇಶ ನಾಯಕ, ಆಡಳಿತಾಧಿಕಾರಿ ನಾಗೇಶ ಭಟ್, ಪ್ರಾಂಶುಪಾಲ ಶ್ರೀನಾಥ ಪೈ, ಶಿಕ್ಷಣ ಸಂಯೋಜಕರಾದ ಪಿ.ಎಸ್.ಹೆಬ್ಬಾರ, ಬೋಧಕ ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.