‘ನೀರ’ವ್ ಮೋದಿಗೆ ‘ತ್ಯಾಂಕ್ಯೂ’ ಹೇಳಿದ ಪ್ರಧಾನಿ ಮೋದಿ!

Source: sonews | By Staff Correspondent | Published on 17th March 2019, 12:08 AM | National News | Don't Miss |

ಹೊಸದಿಲ್ಲಿ: ಲೋಕಸಭಾ ಚುನಾವಣೆಗೆ ಇನ್ನೇನು ಕೆಲವು ದಿನಗಳಿರುವಂತೆಯೇ ಪ್ರಧಾನಿ ನರೇಂದ್ರ ಮೋದಿ #MainBhiChowkidar ಎಂಬ ಆನ್ ಲೈನ್ ಆಂದೋಲನವೊಂದಕ್ಕೆ ಚಾಲನೆ ನೀಡಿದ್ದಾರೆ. #MainBhiChowkidar ಎಂಬ ಹ್ಯಾಶ್ ಟ್ಯಾಗ್ ಮೂಲಕ ಟ್ವೀಟ್ ಮಾಡಿ ಭ್ರಷ್ಟಾಚಾರದ ಬಗ್ಗೆ ದೇಶದ ಜನರು ತಮ್ಮ ವಿರೋಧ ವ್ಯಕ್ತಪಡಿಸಬೇಕು ಎನ್ನುವುದು ಪ್ರಧಾನಿಯವರ ಉದ್ದೇಶವಾಗಿದೆ. ಆದರೆ ಇದೀಗ ಇದೇ ಹ್ಯಾಶ್ ಟ್ಯಾಗ್ ನಿಂದಾಗಿ ಬಿಜೆಪಿ ಹಾಗು ಪ್ರಧಾನಿ ಮೋದಿ ನಗೆಪಾಟಲಿಗೀಡಾಗಿದ್ದಾರೆ.

‘ಚೌಕಿದಾರ್ ಚೋರ್ ಹೈ’ಎನ್ನುವ ಕಾಂಗ್ರೆಸ್ ಹೇಳಿಕೆಗೆ ತಿರುಗೇಟು ನೀಡಲು ಈ ಹ್ಯಾಶ್ ಟ್ಯಾಗ್ ಆಂದೋಲನ ಆರಂಭಿಸಲಾಗಿದೆ ಎಂದು ಅಭಿಪ್ರಾಯಿಸಲಾಗುತ್ತಿದೆ. ಈ ಹ್ಯಾಶ್ ಟ್ಯಾಗನ್ನು ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಯಾರಾದರೂ #MainBhiChowkidar ಎನ್ನುವ ಹ್ಯಾಶ್ ಟ್ಯಾಗ್ ಜೊತೆಗೆ ಟ್ವೀಟ್ ಮಾಡಿದರೆ ಅವರಿಗೆ ಸ್ವಯಂಚಾಲಿತ ಧನ್ಯವಾದ (ತ್ಯಾಂಕ್ಯೂ) ಸಲ್ಲಿಸುವ ಹಾಗೆ ಮಾಡಲಾಗಿತ್ತು. ಪ್ರಧಾನಿಯವರ ಅಧಿಕೃತ ಟ್ವಿಟರ್ ಖಾತೆಯಿಂದಲೇ ಈ ಪ್ರತಿಕ್ರಿಯೆ ಹೋಗುತ್ತಿತ್ತು.  ಆದರೆ ಇದುವೇ ಬಿಜೆಪಿ ಪಾಲಿಗೆ ಮುಳುವಾಯಿತು.

ಪಿಎನ್ ಬಿ ವಂಚನೆಯ ರೂವಾರಿ ನೀರವ್ ಮೋದಿ ಹೆಸರಿನಲ್ಲಿರುವ (ನಕಲಿ) @niiravmodi ಎಂಬ ಖಾತೆಯೊಂದು ಪ್ರಧಾನಿಯವರು ಸೂಚಿಸಿದ್ದ ಹ್ಯಾಶ್ ಟ್ಯಾಗ್ ಬಳಸಿ ಟ್ವೀಟ್ ಮಾಡಿತ್ತು. ಈ ಟ್ವೀಟ್ ಗೆ ಪ್ರಧಾನಿಯವರ ಖಾತೆಯಿಂದ “@niiravmodi ನಿಮ್ಮ ಪಾಲ್ಗೊಳ್ಳುವಿಕೆಯಿಂದ #MainBhiChowkidar ಗೆ ಬಲ ಬಂದಂತಾಗಿದೆ” ಎಂದು ಸ್ವಯಂಚಾಲಿಯವಾಗಿ ಪ್ರತಿಕ್ರಿಯಿಸಲಾಯಿತು. ಕೂಡಲೇ ಇದು ಟ್ವಿಟರಿಗರ ಕಣ್ಣಿಗೆ ಬಿದ್ದಿದ್ದು ಪ್ರಧಾನಿಯವರ ಹಾಗು ಬಿಜೆಪಿಯ ಕಾಲೆಳೆಯತೊಡಗಿದರು. ಅವುಗಳಲ್ಲಿ ಕೆಲವು ಟ್ವೀಟ್ ಗಳು ಈ ಕೆಳಗಿನಂತಿವೆ.

ಕೃಪೆ:varthabharati.in

Read These Next

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...