ಮುರ್ಡೇಶ್ವರ : ಲಯನ್ಸ್ ಕ್ಲಬ್ ಮುರ್ಡೇಶ್ವರ ವತಿಯಿಂದ ಕೊಡಗು ಸಂತೃಸ್ತರಿಗಾಗಿ “ಮುಖ್ಯಮಂತ್ರಿಗಳ ಪರಿಹಾರ ನಿಧಿ”ಗೆ 50000ರೂಪಾಯಿಗಳ ಸಹಾಯವನ್ನು ನೀಡಲಾಯಿತು. ಚೆಕ್ನ್ನು ಲಯನ್ಸ್ ಅಧ್ಯಕ್ಷ ನಾಗರಾಜ ಭಟ್ ತಹಶೀಲ್ದಾರ ವಿ.ಎನ್ ಬಾಡಕರ್ ರಿಗೆ ಹಸ್ತಾಂತರಿಸಿದರು.
ಈ ಸಂದದರ್ಭದಲ್ಲಿ ಲಯನ್ಸ್ ಕಾರ್ಯದರ್ಶಿ ನಾಗೇಶ ಮಡಿವಾಳ. ಡಾ.ಸುನೀಲ್ ಜತನ್, ಡಾ.ವಾಧಿರಾಜ ಭಟ್, ಡಾ.ಹರಿಪ್ರಸಾದ ಕಿಣಿ, ಎ.ಎನ್.ಶೆಟ್ಟಿ, ತಿಲಕ್ ರಾವ್, ಸುಬ್ರಾಯ ನಾಯ್ಕ, ವಿಶ್ವನಾಥ ಕಾಮತ, ಮೋಹನ ನಾಯ್ಕ, ಕಿರಣ ಕಾಯ್ಕಿಣಿ, ಗೌರೀಶ ನಾಯ್ಕ, ಶ್ರೀಧರ ನಾಯ್ಕ ಹಾಜರಿದ್ದರು.