ಶಹೀದ್ ದಿವಸ್ ಆಚರಣೆ

Source: S O News service | By Staff Correspondent | Published on 28th March 2017, 12:35 AM | Coastal News | Don't Miss |

ಮುಂಡಗೋಡ; ಭಗತ್‌ಸಿಂಗ, ಸುಕದೇವ ಥಾಪರ ಮತ್ತು ಶಿವರಾಮ ರಾಜಗುರು ಅವರ ಶಹೀದ ದಿವಸವನ್ನು ಯುವಾ ಬ್ರಿಗೇಡ ವತಿಯಿಂದಾ ತಾಲೂಕಿನ ನಂದಿಗಟ್ಟಾ ಕಾತುರ ಹಾಗೂ ಮೈನಳ್ಳಿ ಗ್ರಾಮಗಳಲ್ಲಿ ಆಚರಿಸಲಾಯಿತು.
ತಾಲೂಕಾ ಯುವಾ ಬ್ರಿಗೇಡ ಕಾರ್ಯಕರ್ತರಾದ ನಂದಿಗಟ್ಟಿಯಲ್ಲಿ ಅನಿಲ ಕೊಟಗೊಣಸಿ,ಕಾತುರನಲ್ಲಿ ಆನಂದ ಹಾಗೂ ಮೈನಳ್ಳಿಯಲ್ಲಿ ಮೋಹನ್ನರಾಜ ಅವರ ನೇತ್ರತ್ವದಲ್ಲಿ ಮೂರು ಗ್ರಾಮಗಳಲ್ಲಿ ಸಾಯಂಕಾಲದ ಹೊತ್ತಿಗೆ ಭಗತ್‌ಸಿಂಗ, ಸುಕದೇವ ಥಾಪರ ಮತ್ತು ಶಿವರಾಮ ರಾಜಗುರು ಅವರ ತ್ಯಾಗ ಮತ್ತು ಬಲಿದಾನದ ಸ್ಮರಣೆಯ ಮೂಲಕ ಅವರ ಆತ್ಮಕ್ಕೆ ಶಾಂತಿಯನ್ನು ಕೋರಿ ಅವರ ಪೋಟೋಗಳಿಗೆ ಪೂಜೆ ಸಲ್ಲಿಸಿ ಬೈಕ ರ‍್ಯಾಲಿ ಮಾಡಿದ್ದಲ್ಲದೆ.ಊರ ಸಾರ್ವಜನಿಕರು ಹಾಗು ಯುವಕರು ಸೇರಿ ಕೈಯಲ್ಲಿ ಮೇಣದ ಬತ್ತಿಯನ್ನು ಹಿಡಿದು ಮೇರವಣೆಗೆ ಮೂಲಕ ಮನೆ ಮನೆಗಳಲ್ಲಿ ದೀಪವನ್ನು ಬೆಲಗುವುದರ ಮೂಲಕ  ದೇಶಕ್ಕಾಗಿ ಹುತಾತ್ಮರಾದ ಸ್ವಾತಂತ್ರವೀರರ ಸ್ಮರಣೆ ಮಾಡಿ ಶಹೀದ ದಿನಾಚರಣೆಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಸಾರ್ವಜನಿಕರು ಹಾಗೂ ಯುವಾ ಬ್ರಿಗೇಡನ ತಾಲೂಕಾ ಕಾರ್ಯಕರ್ತರು ಹಾಜರಿದ್ದರು.   

Read These Next

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...