ಮುಂಡಗೋಡ : ಹರಿದು ಬಿದ್ದ ವಿದ್ಯುತ್ ತಂತಿ ತುಳಿದು ಜಾನವಾರು ಗಳು ಸತ್ತ ಘಟನೆ ತಾಲೂಕಿನ ಬೆಡಸ್ಗಾಂವ ಗ್ರಾಮದ ಸರ್ವೇನಂ ೪೧ ರಲ್ಲಿ ದೊಡ್ಡ ಕೆರೆ ಹತ್ತಿರ ಸಂಭವಿಸಿದೆ.
ಆಕಳು ಮತ್ತು ಎತ್ತು ವಿದ್ಯುತ್ ಅವಘಡದಲ್ಲಿ ಮೃತಪಟ್ಟಿವೆ. ದೊಡ್ಡ ಕೆರೆಯ ಹತ್ತಿರ ಮೆಯುತ್ತಿದ್ದಾಗ ಸುಮಾರು ೪೦ ಸಾವಿರ ರೂ ಬೆಲೆಬಾಳುವ ಜಾನವಾರುಗಳು ಹರಿದು ಬಿದ್ದ ವಿದ್ಯುತ್ ತಂತಿ ತುಳಿದ ಕಾರಣದಿಂದ ಮೃತಪಡಲು ಕಾರಣವೆನ್ನಲಾಗಿದೆ.
ಪರಮೇಶ್ವರ ನಾಯಕ ನಿಗೆ ಸಂಬಂದ ಪಟ್ಟ ಜಾನುವಾರು ಗಳಾಗಿವೆ. ಎಂದು ತಿಳಿದು ಬಂದಿದೆ. ಈ ಕುರಿತು ಪೊಲೀಸ ಠಾಣೆಯಲ್ಲಿ ದೂರು ದಾಖಲಾಗಿದೆ