ಮುಂಡಗೋಡ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಮುಂಡಗೋಡ ಇವರ ಸಂಯುಕ್ತಾಶ್ರಯದಲ್ಲಿ ವಿದ್ಯಾರ್ಥಿಗಳಲ್ಲಿ ಬಾಲ್ಯ ವಿವಾಹ ನಿಷೇದ ಕುರಿತು ಮಂಗಳವಾರ ಪಟ್ಟಣದಲ್ಲಿ ಜಾಥಾ ನಡೆಸಲಾಯಿತು.
ಇಲ್ಲಿಯ ಸಿವಿಲ್ ನ್ಯಾಯಾಲಯದ ಪ್ರಭಾರಿ ನ್ಯಾಯಾಧೀಶ ಶಮೀರ ನಂದ್ಯಾಲ್ ಹಾಗೂ ತಹಸೀಲ್ದಾರ ಅಶೋಕ ಗುರಾಣಿ ಚಾಲನೆ ನೀಡಿದರು. ಸರಕಾರಿ ಅಭಿಯೋಜಕ ಎಂ.ಎಚ್.ನಾಯ್ಕ,ನ್ಯಾಯವಾದಿಗಳ ಸಂಘದ ಅಧ್ಯಕ್ಷ ಗುಡ್ಡಪ್ಪ ಕಾತೂರ ಕಾರ್ಯದರ್ಶಿ ಸಲೀಂ ನಂದಿಗಟ್ಟಿದೈಹಿಕ ಶಿಕ್ಷಣ ಪರಿವೀಕ್ಷಕ ಎನ್.ಆರ್. ಕಳ್ಳಿಮನಿ ಹಾಗೂ ಸಿಡಿಪಿಒ ಕಾರ್ಯಾಲಯದ ದೀಪಾ ಹಾಗೂ ಸುರೇಖಾ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.