ಮುಂಬೈ: ಧರ್ಮದ ಹೆಸರಿನಲ್ಲಿ ಉದ್ರೇಕಿತರಾಗಿ ಹತ್ಯೆಯನ್ನು ಮಾಡಿದ್ದಾರೆ ಎಂದು ಬಾಂಬೆ ಹೈಕೋರ್ಟ್ ಜಡ್ಜ್ ಮುಸ್ಲಿಂ ವ್ಯಕ್ತಿ ಮೊಹ್ಸಿನ್ ಶೇಖ್ ಹತ್ಯೆ ಮಾಡಿರುವ ಹಿಂದೂ ರಾಷ್ಟ್ರ ಸೇನೆಯ ಮೂವರು ಸದಸ್ಯರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದು, ಹೈಕೋರ್ಟ್ ಆದೇಶದಿಂದ ನಿರಾಸೆಗೊಂಡ ಮೊಹ್ಸಿನ್ ಶೇಖ್ ಪೋಷಕರು ಸುಪ್ರೀಂ ಮೊರೆ ಹೋಗುವುದಾಗಿ ತಿಳಿಸಿದ್ದಾರೆ.
2014 ರಲ್ಲಿ ಪುಣೆಯಲ್ಲಿ ಹಿಂದೂ ರಾಷ್ಟ್ರ ಸೇನೆಯ ಸದಸ್ಯರು ಮೊಹ್ಸಿನ್ ಶೇಖ್ ನನ್ನು ಹಾಕಿ ಸ್ಟಿಕ್ ಗಳು ಮತ್ತು ಕ್ಲಲುಗಳಿಂದ ಹೊಡೆದು ಅಮಾನುಷವಾಗಿ ಹತ್ಯೆ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂ ರಾಷ್ಟ್ರ ಸೇನೆಯ 21 ಮಂದಿಯನ್ನು ಪೊಲೀಸರು ಬಂಧಿಸಿದ್ದರು.
ಶಿವಾಜಿ, ಶಿವಸೇನಾ ಮುಖ್ಯಸ್ಥ ಬಾಲಾಠಾಕ್ರೆ ವಿರುದ್ಧ ಪೋಸ್ಟ್ ಗಳನ್ನು ಹಾಕಿದ್ದಾನೆ ಎಂದು ಆರೋಪಿಸಿ ದುಷ್ಕರ್ಮಿಗಳು ಹತ್ಯೆ ಮಾಡಿದ್ದರು.
ವಿಜಯ್ ರಾಜೇಂದ್ರ, ಗಣೇಶ್, ಅಜಯ್ ದಿಲೀಪ್ ನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದು, ಈ ವೇಳೆ ಜಡ್ಜ್ , ಹತ್ಯೆಯಾದವರು ಇನ್ನೊಂದು ಧರ್ಮದವರಾಗಿದ್ದು, ಆರೋಪಿಗಳು ಧರ್ಮದ ಹೆಸರಿನಲ್ಲಿ ಉದ್ರೇಕಿತರಾಗಿ ಹತ್ಯೆಯನ್ನು ಮಾಡಿದ್ದಾರೆ. ಮತ್ತು ಆರೋಪಿಗಳಿಗೆ ಬೇರೆ ಯಾವುದೇ ರೀತಿಯ ಕ್ರಿಮಿನಲ್ ಹಿನ್ನೆಲೆಗಳಿಲ್ಲ ಎಂದು ಜಸ್ಟೀಸ್ ಮೃದುಲಾ ಹೇಳಿದ್ದಾರೆ.
ಮತ್ತೊಂದು ಧರ್ಮದ ಮುಗ್ಧ ವ್ಯಕ್ತಿಯ ಕೊಲೆಗೆ ಪ್ರಚೋದನಕಾರಿ ಭಾಷಣ ಅನುಮತಿಯೇ ಎಂದು ಪ್ರಶ್ನಿಸಿರುವ ಮೊಹ್ಸಿನ್ ತಂದೆ ಮೂವರು ಆರೋಪಿಗಳನ್ನು ಹತ್ಯೆ ನಡೆದ ಸ್ಥಳದಿಂದ ಬಂಧಿಸಲಾಗಿದೆ. ಆದರೆ ಹೈಕೋರ್ಟ್ ಆದೇಶ ತನಗೆ ನಿರಾಸೆ ತಂದಿದ್ದು ಇದನ್ನು ಪ್ರಶ್ನಿಸಿ ಸುಪ್ರೀಂ ಮೊರೆ ಹೋಗುವುದಾಗಿ ತಿಳಿಸಿದ್ದಾರೆ.