ಕಾರವಾರ: ಅಂಚೆ ಇಲಾಖೆಯು ದೀನ ದಯಾಳ ಸ್ಪರ್ಶ ಯೋಜನೆಯಡಿ ಶಾಲಾ ಮಕ್ಕಳ ಅಂಚೆ ಚೀಟಿ ಸಂಗ್ರಹಣೆಯ ಹವ್ಯಾಸವನ್ನು ಹುರಿದುಂಬಿಸಲು ವಾರ್ಷಿಕ 6 ಸಾವಿರ ಶಿಷ್ಯವೇತನ ನೀಡುತ್ತಿದೆ.
ವಿದ್ಯಾರ್ಥಿಗಳನ್ನು ಅಂಚೆ ಚೀಟಿ ಪ್ರಶ್ನಾವಳಿ ಮೂಲಕ ಆಯ್ಕೆ ಮಾಡಲಾಗುವುದು. ಅಂಚೆ ಚೀಟಿ ಪ್ರಶ್ನಾವಳಿಯಲ್ಲಿ ಭಾಗವಹಿಸಲು ಜುಲೈ 20 ಕೊನೆಯ ದಿನವಾಗಿರುತ್ತದೆ.
ಪ್ರಶ್ನಾವಳಿಯಲ್ಲಿ ಭಗವಹಿಸಲು, 6 ರಿಂದ 9ನೇ ತರಗತಿಯ 2017-18ನೇ ಶೈಕ್ಷಣಿಕ ವರ್ಷದಲ್ಲಿ ಶೇ.60 ಅಂಕ ಪಡೆದಂತಹ ವಿದ್ಯಾರ್ಥಿಗಳು ಅರ್ಹರಿದ್ದು, ವಿದ್ಯಾರ್ಥಿಗಳು ಅಂಚೆ ಚೀಟಿ ಖಾತೆ ಹೊಂದಿರಬೇಕು ಅಥವಾ ಅಂಚೆ ಚೀಟಿ ಕ್ಲಭ್ ಸದಸ್ಯರಾಗಿರಬೇಕು.
ಹೆಚ್ಚಿನ ಮಾಹಿತಿಗಾಗಿ www.indiapost.gov.in ಹಾಗೂ www.karnatakapost.gov.in ನೋಡಬಹುದಾಗಿದೆ ಎಂದು ಕಾರವಾರ ವಿಭಾಗದ ಅಂಚೆ ಅಧಿಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.