ವೃದ್ಧಾಶ್ರಮಕ್ಕಾಗಿ ಹಿರಿಯ ನಾಗರಿಕರಿಗೆ ಪ್ರವೇಶವಕಾಶ
ಕಾರವಾರ: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ಅನುದಾನ ಪಡೆದು ಹಿರಿಯ ನಾಗರಿಕರ ವೃದ್ಧಾಶ್ರಮವನ್ನು ನಡೆಸುತ್ತಿರುವ ಶ್ರೀ ರಾಘವೇಂದ್ರ ವೃದ್ಧಾಶ್ರಮ ಕಾಳಮ್ಮನಗರ, ಯಲ್ಲಾಪುರ, ಇಲ್ಲಿಗೆ ನಿರ್ಗತಿಕ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಸಂಸ್ಥೆಯನ್ನು ಸಂಪರ್ಕಿಸಿ ಪ್ರವೇಶವನ್ನು ಪಡೆಯಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಅಧ್ಯಕ್ಷರು, ಮಲ್ಲಿಕಾರ್ಜುನ ಜನಸೇವಾ ಸೊಸೈಟಿಯ ಶ್ರೀ ರಾಘವೇಂದ್ರ ವೃದ್ಧಾಶ್ರಮ ಕಾಳಮ್ಮನಗರ, ಯಲ್ಲಾಪುರ, ಮೊಬೈಲ್ ಸಂಖ್ಯೆ : 9740414787, 9448160642 ಗೆ ಸಂಪರ್ಕಿಸಿ ಮಾಹಿತಿಯನ್ನು ಪಡೆಯಬಹುದಾಗಿದೆ ಎಂದು ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.