ಶ್ರೀ ಗೋಪಾಲಕೃಷ್ಣ ಸಹಕಾರಿ ಪತ್ತಿನ ಸಂಘ ವಾರ್ಷಿಕ ಮಹಾಸಭೆ

Source: sonews | By Staff Correspondent | Published on 18th September 2017, 11:50 PM | Coastal News | Don't Miss |

ಭಟ್ಕಳ:  ಶ್ರೀ ಗೋಪಾಲಕೃಷ್ಣ ಸಹಕಾರಿ ಪತ್ತಿನ ಸಂಘ ನಿಯಮಿತ ಇದರ ೨೦೧೬-೨೦೧೭ ನೇ ಸಾಲಿನ ವಾರ್ಷಿಕ ಮಹಾಸಭೆ ಅಧ್ಯಕ್ಷ ಶ್ರೀಧರ ಮಂಜು ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಜರುಗಿತು. 

ವಾರ್ಷಿಕ ವರದಿಯನ್ನು ಮಂಡಿಸಿದ ಅವರು ಸಂಘವು ಕಳೆದ ವರ್ಷಾಂತ್ಯಕ್ಕೆ  ೨೧೪೮ ಸದಸ್ಯರನ್ನು ಹೊಂದಿದ್ದು ಶೇರು ಬಂಡವಾಳ ರೂ.೪೨.೬೭ ಲಕ್ಷಕ್ಕೆ ಎರಿದೆ. ವರ್ಷಾಂತ್ಯೆಕ್ಕೆ ಠೇವು  ಸಂಗ್ರಹಣೆ ರೂ.೧೨೯೨.೭೧ ಲಕ್ಷವಾಗಿದ್ದು ದುಡಿಯುವ  ಬಂಡವಾಳ ರೂ.೧೪೪೭.೭೩ ಲಕ್ಷಗಳಷ್ಟಾಗಿದೆ.  ವರದಿ ವರ್ಷದ ಕೊನೆಗೆ ಸಂಘವು ನೀಡಿರುವ ಎಲ್ಲಾ ವಿಧವಾದ  ಸಾಲಗಳ ಮೊತ್ತ ರೂ ೯೩೮.೨೮ ಲಕ್ಷಗಳಷ್ಟಾಗಿದ್ದು ಸಾಲ  ವಸೂಲಾತಿಯಲ್ಲಿ ಉತ್ತಮ ಪ್ರಗತಿ  ಸಾಧಿಸಿದೆ ಎಂದರು. ಸಾಲ ವಸೂಲಾತಿಯಲ್ಲಿ ಶೇ.೯೯.೩೨ರಷ್ಟು ಸಾಧನೆ ಮಾಡಿದ್ದು ವರ್ಷಾಂತ್ಯಕ್ಕೆ ನಿಹ್ವಳ ಲಾಭ ರೂ.೪೨.೯೮ ಲಕ್ಷ ಗಳಿಸಿದೆ ಎಂದರು. 
ಸದಸ್ಯರಾದ ವೆಂಕಟೇಶ ಶೆಟ್ಟಿ, ಮಂಜಯ್ಯ ಶೆಟ್ಟಿ, ಲಕ್ಷ್ಮಣ ಶೆಟ್ಟಿ, ನಾರಾಯಣ ಶೆಟ್ಟಿ, ದತ್ತಾತ್ರಯ ಸಿ,.ಶೆಟ್ಟಿ ಇತರರು ವ್ಯವಹಾರಕ್ಕೆ  ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗಳಿಗೆ ಅಧ್ಯಕ್ಷರು  ಸಮರ್ಪಕವಾಗಿ ಉತ್ತರಿಸಿದರು.

ಸಂಘದ ಉಪಾಧ್ಯಕ್ಷ  ನಾರಾಯಣ ಮಂಜುನಾಥ ಶೆಟ್ಟಿ, ನಿರ್ದೇಶಕರುಳಾದ  ಗಣಪತಿ ವಿಠ್ಠಲ ಶೆಟ್ಟಿ,  ಶ್ರೀಧರ ತಿಮಪ್ಪ  ಶೆಟ್ಟಿ, ಗಿರೀಶ ಲೋಕೇಶ್ವರ ಶೆಟ್ಟಿ, ಕೃಷ್ಣಮೂರ್ತಿ ಶೇಷಗಿರಿ ಶೆಟ್ಟಿ, ಉದಯ ನಾಗೇಶ ಶೆಟ್ಟಿ.   ರಾಧಾಕೃಷ್ಣ ಕುಪ್ಪಯ್ಯ ಶೆಟ್ಟಿ, ನಾಗರತ್ನ ಮಂಜುನಾಥ ಶೆಟ್ಟಿ, ಉಷಾ ಉದಯ ಶೆಟ್ಟಿ ಉಪಸ್ಥಿತರಿದ್ದರು  

ಕಳೆದ ಸಾಲಿನ ಎಸ್.ಎಸ್.ಎಲ್.ಸಿ. ಹಾಗೂ ಪಿ.ಯು.ಸಿ.ಯಲ್ಲಿ ಅತೀ ಹೆಚ್ಚು ಅಂಕ ಪಡೆದ  ಸದಸ್ಯರ ಪ್ರತಿಭಾವಂತ ಮಕ್ಕಳನ್ನು ಪುರಸ್ಕರಿಸಲಾಯಿತು. 
 

Read These Next

ಜಿಲ್ಲೆಯಲ್ಲಿ ಮೇ 7 ರಂದು ಮತದಾನ, ತಕ್ಷಣದಿಂದಲೇ ನೀತಿ ಸಂಹಿತೆ ಜಾರಿ : ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ

ಕಾರವಾರ : ಚುನಾವಣಾ ಆಯೋಗದ ನಿರ್ದೇಶನದಂತೆ, ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮೇ 7 ರಂದು ಮತದಾನ ನಡೆಯಲಿದ್ದು, ಜಿಲ್ಲೆಯಲ್ಲಿ ...

ಭಟ್ಕಳ: ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಸೂಕ್ಷ್ಮ ಬೋಧನೆ, ಲಲಿತಕಲೆ ಮತ್ತು ರಂಗಭೂಮಿ ಕಾರ್ಯಾಗಾರ ಮುಕ್ತಾಯ

ಶಿಕ್ಷಕರಾದವರು ವಿದ್ಯಾರ್ಥಿಗಳಿಗೆ ಸಂಸ್ಕಾರ, ಮಾನವೀಯ ಮೌಲ್ಯ, ಪರಸ್ಪರ ಗೌರವ ನೀಡುವುದು ಮತ್ತು ರಾಷ್ಟ್ರಭಕ್ತಿಯನ್ನು ಹೆಚ್ಚಿಸುವ ...