ಮುರುಡೇಶ್ವರ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ , ಅಂಧತ್ವ ನಿಯಂತ್ರಣ ವಿಭಾಗ, ಕಾರವಾರ, ಆರ್.ಎನ್.ಎಸ್. ಆಸ್ಪತ್ರೆ,ಮುರ್ಡೇಶ್ವರ ,ಸಿ.ಡಿ.ಟಿ.ಪಿ ಯೋಜನೆ ಆರ್.ಎನ್.ಎಸ್ ಪಾಲಿಟೆಕ್ನಿಕ್ ಮುರ್ಡೇಶ್ವರ, ಲಯನ್ಸ್ ಕ್ಲಬ್ ಮುರ್ಡೇಶ್ವರ, ಐ.ಎಮ್.ಎ.ಭಟ್ಕಳ, ಹಾಗೂ ಲಾಯನ್ಸ್ ರೇವಣಕರ್ ಕಣ್ಣಿನ ಆಸ್ಪತ್ರೆ, ಕುಮಟಾ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಉಚಿತ ಕಣ್ಣಿನ ಶಸ್ತ್ರ ಚಿಕಿತ್ಸೆ ಯಶಸ್ವಿಯಾಯಿತು.
ಲಾಯನ್ಸ್ ರೇವಣಕರ್ ಕಣ್ಣಿನ ಆಸ್ಪತ್ರೆಯ ತಜ್ಞ ವೈದ್ಯರಿಂದ ನಡೆದ ಉಚಿತ ಕಣ್ಣಿನ ಪೊರೆ ತಪಾಸಣಾ ಮತ್ತು ಶಸ್ತ್ರ ಚಿಕಿತಾ ಶಿಬಿರದಲ್ಲಿ 52 ಜನರು ಭಾಗವಹಿಸಿದ್ದರು. ಇವರ ಪೈಕಿ 7 ಜನರಿಗೆ ಕಣ್ಣಿನ ಶಸ್ತ್ರ ಚಿಕಿತ್ಸೆಯನ್ನು ಲಾಯನ್ಸ್ ರೇವಣಕರ್ ಕಣ್ಣಿನ ಆಸ್ಪತ್ರೆ ಕುಮಟಾದಲ್ಲಿ ಯಶಸ್ವಿಯಾಗಿ ಮಾಡಿಸಿ, ಉಚಿತ ಕನ್ನಡಕ ಊಟ ಉಪಹಾರ ನೀಡಿ ನಂತರ ಅವರವರ ಊರಿಗೆ ಕಳುಹಿಸಿಕೊಡಲಾಯಿತು.
ಕಣ್ಣಿನ ಶಸ್ತ್ರ ಚಿಕಿತ್ಸೆಗೆ ಒಳಗಾದ 7 ಜನ ಫಲಾನುಭವಿಗಳೊಂದಿಗೆ, ಶಿಬಿರವನ್ನು ಸಂಘಟಿಸಿದ ಲಯನ್ಸ್ ಕ್ಲಬ್ ನ ಅಧ್ಯಕ್ಷ ಮಂಜುನಾಥ ನಾಯ್ಕ, ಆರ್.ಎನ್.ಎಸ್. ಹಾಸ್ಪಿಟಲ್ ನ ಮೆಡಿಕಲ್ ಡೈರೆಕ್ಟರ್ ಚೇತನ ಕಲ್ಕೂರ್, ಲಯನ್ಸ್ ಪದಾಧಿಕಾರಿಗಳಾದ ಡಾ. ವಾದಿರಾಜ ಭಟ್ ,ಸುಬ್ರಾಯ ನಾಯ್ಕ , ಡಾ. ಹರಿಪ್ರಸಾದ ಕಿಣಿ, ಮಂಜುನಾಥ ದೇವಡಿಗ , ಆರ್.ಎನ್.ಶೇಟ್ ಹಾಗೂ ಸಮುದಾಯ ಅಭಿವೃದ್ಧಿ ಯೋಜನೆಯ ಕೆ. ಮರಿಸ್ವಾಮಿ ಉಪಸ್ಥಿತರಿದ್ದರು.