ಭಟ್ಕಳ: ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯವು ಬಿ.ಇಡಿ ಪ್ರಥಮ ಹಾಗೂ ತೃತೀಯ ಸೆಮಿಸ್ಟರ್ನ ಫಲಿತಾಂಶ ಪ್ರಕಟಿಸಿದ್ದು ಭಟ್ಕಳ ಎಜ್ಯುಕೇಶನ್ ಟ್ರಸ್ಟಿನ್ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯ ಶೇ.100ರಷ್ಟು ಫಲಿತಾಂಶ ದಾಖಲಿಸಿದೆ.
ಪ್ರಥಮ ಸೆಮಿಸ್ಟರ್ನ ವಿದ್ಯಾ ಶಂಕರ ನಾಯ್ಕ ಶೇ.87, ಭಾಗ್ಯಶ್ರೀ ನಾರಾಯಣ ನಾಯ್ಕ ಶೇ.85.83 ಹಾಗೂ ಶೃದ್ಧಾ ದಾಮೋದರ ನಾಯ್ಕ ಶೇ.85.33 ಅಂಕಗಳಿಸಿ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಗಳಿಸಿದ್ದಾರೆ. ತೃತೀಯ ಸೆಮಿಸ್ಟರ್ನಲ್ಲಿ ಸಂಗೀತಾ ಕೆ. ಆರ್. ಶೇ.91.17, ಕವಿತಾ ವಿಷ್ಣು ನಾಯ್ಕ ಶೇ.89.83, ಅಶ್ವಿನಿ ಶ್ರೀಧರ ನಾಯ್ಕ ಹಾಗೂ ಫರ್ಜಾನಾ ಶಿಲಾರ ಶೇ.89.67 ಅಂಕಗಳಿಸಿ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಗಳಿಸಿದ್ದಾರೆ.
ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳು ಹಾಗೂ ಶಿಕ್ಷಣ ಮಹಾವಿದ್ಯಾಲಯದ ಸಾಧನೆಗೆ ಭಟ್ಕಳ ಎಜ್ಯುಕೇಶನ ಟ್ರಸ್ಟಿನ ಅಧ್ಯಕ್ಷ ಡಾ. ಸುರೇಶ ನಾಯಕ, ಮ್ಯಾನೆಜಿಂಗ್ ಟ್ರಸ್ಟೀ ಆರ್. ಜಿ. ಕೊಲ್ಲೆ, ಟ್ರಸ್ಟೀ ಮ್ಯಾನೇಜರ ರಾಜೇಶ ನಾಯಕ, ಆಡಳಿತ ಅಧಿಕಾರಿ ನಾಗೇಶ ಭಟ್, ಪ್ರಾಂಶುಪಾಲ ಡಾ. ಆರ್. ನರಸಿಂಹಮೂರ್ತಿ ಅಭಿನಂದಿಸಿದ್ದಾರೆ.