ಭಟ್ಕಳ: ಹೆಸ್ಕಾಂ ಉಪ-ವಿಭಾಗೀಯ ಕಛೇರಿಯಲ್ಲಿ ಸೆ.೧೬ ರಂದು ಶನಿವಾರ ಬೆಳಿಗ್ಗೆ ೧೦.೩೦ ರಿಂದ ೧.೦೦ ಘಂಟೆಯವರೆಗೆ “ವಿದ್ಯುತ್ ಅದಾಲತ್” ಹಾಗೂ ಮಧ್ಯಾಹ್ನ ೩.೦೦ರಿಂದ ಸಂಜೆ ೫.೩೦ ಘಂಟೆಯವರೆಗೆ “ಗ್ರಾಹಕರ ಸಂವಾದ ಸಭೆ”ಯನ್ನು ಆಯೋಜಿಸಲಾಗಿದೆ ಎಂದು ಸಹಾಯಕ ಕಾರ್ಯ-ನಿರ್ವಾಹಕ ಇಂಜನೀಯರ್ ಮಂಜುನಾಥ್ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಭಟ್ಕಳ ತಾಲ್ಲೂಕಿನ ವ್ಯಾಪ್ತಿಯಲ್ಲಿನ ವಿದ್ಯುತ್ ಗ್ರಾಹಕರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ತಮ್ಮ ತಮ್ಮ ವಿದ್ಯುತ್ ಸಂಬಂಧಿತ ದೂರುಗಳನ್ನು ಶೀಘ್ರವಾಗಿ ಪರಿಹರಿಸಿಕೊಳ್ಳಲು ಅವರು ವಿನಂತಿಸಿಕೊಂಡಿದ್ದಾರೆ.