ಭಟ್ಕಳ: ಇಲ್ಲಿಯ ವಿದ್ಯಾ ಭಾರತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರವೇಶ ಪಡೆದ ಪೂರ್ವ ಪ್ರಾಥಮಿಕ ಮಕ್ಕಳಿಗೆ ವಿದ್ಯಾರ್ಜನೆಯ ಪ್ರಾರಂಭದಲ್ಲಿ ನೀಡುವ ಅಕ್ಷರಾಭ್ಯಾಸ ಕಾರ್ಯಕ್ರಮವನ್ನು ಶಾಲೆಯ ವತಿಯಿಂದ ಪಾಲಕರ ಉಪಸ್ಥಿತಿಯಲ್ಲಿ ನಡೆಸಿಕೊಡಲಾಯಿತು.
ಅತ್ಯಂತ ವಿಧಿವತ್ತಾಗಿ ನಡೆದ ಕಾರ್ಯಕ್ರಮದಲ್ಲಿ ವೈದಿಕರು ಮಕ್ಕಳಿಗೆ ಶಾಸ್ತ್ರ ಸಮ್ಮತವಾಗಿ ಅಕ್ಷರಾಭ್ಯಾಸವನ್ನು ಮಾಡಿಸಿ ಮಕ್ಕಳ ತಂದೆ ತಾಯಿಯರಿಂದಲೇ ಪೂಜಾ ವಿಧಿ ವಿದಾನಗಳನ್ನು ಮಾಡಿಸಿದರು.
ಈ ಸಂದರ್ಭಧಲ್ಲಿ ಭಟ್ಕಳ ಎಜ್ಯುಕೇಶನ್ ಟ್ರಸ್ಟ್ನ ಅಧ್ಯಕ್ಷ ಡಾ. ಸುರೇಶ ನಾಯಕ, ಆಡಳಿತಾಧಿಕಾರಿ ನಾಗೇಶ ಭಟ್ಟ, ಶೈಕ್ಷಣಿಕ ಸಲಹೆಗಾರ ಬಿ.ಆರ್.ಕೆ.ಮೂರ್ತಿ, ಶಾಲಾ ಮುಖ್ಯೋಪಾಧ್ಯಾಯ ರೂಪಾ ರಮೇಶ ಖಾರ್ವಿ, ಶಿಕ್ಷಕ ವೃಂದ ಹಾಗೂ ಪಾಲಕರು ಉಪಸ್ಥಿತರಿದ್ದರು.