ಭಟ್ಕಳ: ಕಳೆದ ಮೂರು ದಿನಗಳಿಂದ ನಿರಂತರವಾಗಿ ಬೀಳುತ್ತಿರುವ ಮಳೆಯಿಂದಾಗಿ ನಗರದ ತಗ್ಗು ಪ್ರದೇಶಗಳು ಜಲಾವೃತ್ತಗೊಂಡಿದ್ದು ಭಟ್ಕಳದ ಬಸ್ ನಿಲ್ದಾಣ ಅಕ್ಷರಶಃ ಹೊಳೆಯಾಗಿ ಮಾರ್ಪಟ್ಟಿದೆ.
ಈ ಕುರಿತು ಸಾರ್ವಜನಿಕರು, ಸಮಾಜಸೇವಕರು ಅಧಿಕಾರಿಗಳಿಗೆ ಜನಪ್ರತಿನಿಧಿಗಳು ಹಲವಾರು ಬಾರಿ ಮನವಿ ಪತ್ರ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗದೆ ಪ್ರಯಾಣಿಕರು ಹಲವು ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಬಸ್ ಬರುವ ಹೋಗುವ ಸಂದರ್ಭದಲ್ಲಿ ಪ್ರಯಾಣಿಕರ ಮೇಲೆ ಮಳೆಯ ರಾಡಿ ನೀರು ಬಟ್ಟೆ ಮೇಲೆ ಬಿದ್ದು ಒದ್ದೆಯಾಗಿರುವ ಎಷ್ಟೋ ಘಟನೆಗಳು ನಡೆದಿವೆ. ಇದರಿಂದಾಗಿ ಹೊರ ಊರಿಗೆ ತೆರಳುವ ಪ್ರಯಾಣಿಕರು ಪೇಚಾಡಿಕೊಳ್ಳುವಂತಹ ಸ್ಥಿತಿ ನಿರ್ಮಾಣವಾಗಿದೆ.
ಇದೆ ಬಸ್ ನಿಲ್ದಾಣದಲ್ಲಿ ನಿರ್ಮಾಣಗೊಂಡಿರುವ ಕೃತಕ ಹೊಳೆಯಲ್ಲಿ ಕಳೆದ ಎರಡು ದಿನಗಳ ಹಿಂದೆ ಸಮಾಜಿಕ ಕಾರ್ಯಕತರಾದ ಮುಸ್ಬಾಉಲ್ ಹಕ್, ಅಬ್ದುಲ್ ರಬಿ ರುಕ್ನುದ್ದೀನ್ ಸನಾವುಲ್ಲಾ ಸೇರಿದಂತೆ ಹಲವರು ಕಾಗದ ದೋಣಿ ಹಾಯ್ದು ಹಾಗೂ ಮೀನು ಹಿಡಿಯುವ ಪ್ರಹಸನ ನಡೆಸಿ ಪ್ರತಿಭಟನೆ ಮಾಡಿದ್ದನ್ನು ಸ್ಮರಿಸಿಕೊಳ್ಳಬಹುದು.