ಕರಾವಳಿಯಲ್ಲಿ ವಂದೇ ಭಾರತ್ ಎಕ್ಸ್ ಪ್ರೆಸ್ ಟ್ರೈನ್ ಆರಂಭ. ಮಂಗಳೂರು ಟು ಮಡಗಾಂ ಮಾರ್ಗ.

Source: SO News | By Laxmi Tanaya | Published on 30th December 2023, 10:41 PM | Coastal News |

ಕಾರವಾರ : ಇಂದಿನಿಂದ  ಮಂಗಳೂರಿನಿಂದ ಮಡಗಾಂವ್ ಗೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಆರಂಭಗೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ವಿವಿಧೆಡೆಯಲ್ಲಿ ಆರಂಭಗೊಂಡ ರೈಲಿಗೆ ಇಂದು ಚಾಲನೆ ನೀಡಿದರು.
 
ಮಂಗಳೂರುಸೆಂಟ್ರಲ್ ರೈಲು ನಿಲ್ದಾಣದಿಂದ ಹೊರಡುವ ವಂದೇ ಭಾರತ್  ರೈಲು ಉಡುಪಿ-ಕಾರವಾರ -ಬಳಿಕ ಮಡಗಾಂವ ಗೆ ತೆರಳಲಿದೆ.  ಬಳಿಕ ಮಡಗಾಂವ ನಿಂದ ಪುನಃ ಮಂಗಳೂರಿಗೆ ಪ್ರಯಾಣಿಸಲಿದೆ.

ಈ ರೈಲು ಗಂಟೆಗೆ 120 ಕಿಮೀ ಗೂ ಅಧಿಕ ವೇಗದಲ್ಲಿ ಚಲಿಸಲಿದ್ದು, 8 ಕೋಚ್ ಗಳನ್ನು ಹೊಂದಿದೆ. ಸಂಪೂರ್ಣ ಹವಾನಿಯಂತ್ರಿತವಾಗಿದ್ದು, ಏರ್ ಲೈನ್ ಮಾದರಿಯ ಸೀಟುಗಳ ಜೊತೆಗೆ ಎಕ್ಸಿಕ್ಯೂಟಿವ್ ಚೇರ್ ಗಳು ಮತ್ತು ಸಸ್ಯಾಹಾರಿ ಮತ್ತು ಮಾಂಸಾಹಾರಿ ಊಟದ ವ್ಯವಸ್ಥೆ ಕೂಡಾ ಇದೆ. ಆನ್ಬೋರ್ಡ್ ವೈಫೈ, ರೀಡಿಂಗ್ ಲೈಟ್ ವ್ಯವಸ್ಥೆ,ಸ್ವಯಂ ಚಾಲಿತ ಬಾಗಿಲುಗಳು, ಸ್ಮೋಕ್ ಅಲರ್ಟ್ , ಸಿಸಿಟಿವಿಗಳು ಮತ್ತಿತರ ಆಧುನಿಕ ಸೌಲಭ್ಯಗಳು ಇವೆ.

ಗುರುವಾರ ಹೊರತುಪಡಿಸಿ ವಾರದ 6 ದಿನ ಈ ರೈಲು ಸಂಚರಿಸಲಿದೆ. ಈ ಎಕ್ಸಪ್ರೆಸ್ ಟ್ರೇನ್, ಪ್ರತಿದಿನ ಬೆಳಿಗ್ಗೆ 8-30ಕ್ಕೆ ಮಂಗಳೂರು ಸೆಂಟ್ರಲ್ನಿಂದ ಹೊರಟು 9-48ಕ್ಕೆ ಉಡುಪಿ, 12-08ಕ್ಕೆ ಕಾರವಾರ ತಲುಪಿ ನಂತರ 1-15ಕ್ಕೆ ಮಡಗಾಂವ ತಲುಪಲಿದೆ. ಬಳಿಕ ಸಂಜೆ 6-10ಕ್ಕೆ ಮಡಗಾಂನಿಂದ ಪುನಃ ಹೊರಟು 6-55ಕ್ಕೆ ಕಾರವಾರ, ರಾತ್ರಿ 9-12ಕ್ಕೆ ಉಡುಪಿ ಹಾಗೂ ರಾತ್ರಿ 10-45ಕ್ಕೆ ಮಂಗಳೂರು ತಲುಪಲಿದೆ. 

ಗಂಟೆಗೆ 120 ಕಿಲೋಮೀಟರ್ ಕ್ರಮಿಸುವ ಈ ರೈಲು 8 ಕೋಚ್ಗಳನ್ನ ಹೊಂದಿದೆ. ಸಂಪೂರ್ಣ ಹವಾನಿಯಂತ್ರಿತವಾಗಿದ್ದು, ಏರ್ಲೈನ್ ಮಾದರಿಯ ಸೀಟುಗಳ ಜೊತೆಗೆ ಎಕ್ಸಿಕ್ಯೂಟಿವ್ ಚೇರ್ ಗಳು ಇದೆ. ಆನ್ಬೊರ್ಡ್ ವೈಪೈ, ರೀಡಿಂಗ್ ಲೈಟ್ ವ್ಯವಸ್ಥೆ, ಸ್ವಯಂಚಾಲಿತ ಡೋರ್, ಸಿಸಿಟಿವಿ ಇದೆ. ಸುಮಾರು 319 ಕಿಲೋಮೀಟರ್ ದೂರವನ್ನ 4-35 ನಿಮಿಷಕ್ಕೆ ರೈಲು ತಲುಪಲಿದೆ.  ಮಂಗಳೂರು, ಉಡುಪಿ, ಕಾರವಾರ ಮತ್ತು ಮಡಗಾಂವ ನಲ್ಲಿ ಅದ್ದೂರಿಯಾಗಿ ಸ್ವಾಗತಿಸಲಾಯಿತು.

Read These Next

ಕಾರವಾರ: ಹಣ, ಉಡುಗೊರೆ ಹಂಚಿಕೆ ಬಗ್ಗೆ ಹೆಚ್ಚಿನ ನಿಗಾ ವಹಿಸಿ : ವಿಶೇಷ ವೆಚ್ಚ ವೀಕ್ಷಕ ಬಿ.ಮುರಳಿ ಕುಮಾರ್

ಮತದಾರರಿಗೆ ಹಣ, ಉಡುಗೊರೆ ಮತ್ತಿತರ ಆಮಿಷಗಳನ್ನು ಒಡ್ಡುವುದರ ಕುರಿತಂತೆ ತೀವ್ರ ನಿಗಾ ವಹಿಸಬೇಕು, ಈ ಕುರಿತಂತೆ ದೂರುಗಳು ಬಂದ ...

ಕಾರವಾರ: ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ತಿಂಗಳಿಗೆ ಹತ್ತೂವರೆ ಸಾವಿರ: ಸೈಲ್

ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರವನ್ನ ಗೆಲ್ಲಿಸಿದರೆ ತಿಂಗಳಿಗೆ ಹತ್ತೂವರೆ ಸಾವಿರ ಬಡ ಮಹಿಳೆಯರ ಖಾತೆಗೆ ಬರಲಿದೆ. ಈ ಅವಕಾಶವನ್ನ ...

ಭಟ್ಕಳದ ಅಂಜುಮಾನ್ ಇಂಜಿನಿಯರಿಂಗ್ ಕಾಲೇಜು ಗುಡ್ಡದ ಮೇಲಿನ ಸ್ವರ್ಗ - ಡಾ. ದಿನೇಶ್ ಗಾಂವ್ಕರ್

೨೦೨೪- ಶಿಕ್ಷಕ ಶೀರ್ಷಿಕೆ ಅಡಿಯಲ್ಲಿ ಅಂಜುಮಾನ್ ತಾಂತ್ರಿಕ ವಿದ್ಯಾಲಯದಲ್ಲಿ ಕನ್ನಡ ವೇದಿಕೆಯ ಕಾರ್ಯಕ್ರಮವನ್ನು ವಿದ್ಯಾರ್ಥಿಗಳು ...