ಜ.೧೦ ರಂದು ರಾಣಿ ಚೆನ್ನಭೈರಾದೇವಿ ಕೃತಿಯ ವಿಚಾರ ಸಂಕಿರಣ ಮತ್ತು ಪುಸ್ತಕ ಪ್ರದರ್ಶನ
ಭಟ್ಕಳ: ಭಟ್ಕಳದ ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ ಬಿಎ ವಿಭಾಗದಿಂದ ಜ. ೧೦ ರಂದು ಬುಧವಾರ ಬೆಳಗ್ಗೆ ೧೦ ಗಂಟೆಗೆ ರಾಣಿ ಚೆನ್ನಭೈರಾದೇವಿ ಹಾಗೂ ಈ ಕೃತಿಯ ಕುರಿತ ವಿಚಾರ ಸಂಕಿರಣ, ವಸ್ತು ಪ್ರದರ್ಶನ, ಪುಸ್ತಕ ಪ್ರದರ್ಶನ ಹಾಗೂ ಮಾರಾಟವನ್ನು ಆಯೋಜಿಸಲಾಗಿದೆ ಎಂದು ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ.
ರಾಣಿ ಚೆನ್ನಭೈರಾದೇವಿ ಈ ಪ್ರಖ್ಯಾತ ಕೃತಿಯ ಕೃರ್ತು ಡಾ.ಗಜಾನನ ಶರ್ಮ ಹಾಗೂ ಇತಿಹಾಸಕಾರರಾದ ಖ್ಯಾತ ವಾಗ್ಮಿ ಸೋಂದಾ ಲಕ್ಷ್ಮೀಶ ಹೆಗಡೆ ಆಗಮಿಸಲಿದ್ದು, ಸಾಹಿತ್ಯಾಸಕ್ತರು, ಇತಿಹಾಸಕಾರರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಕೋರಿದ್ದಾರೆ. ಪುಸ್ತಕ ಪ್ರದರ್ಶನ-ಮಾರಾಟ, ವಸ್ತು ಪ್ರದರ್ಶನ ಬೆಳಿಗ್ಗೆ ೧೦ ರಿಂದ ಸಂಜೆ ೪ ಗಂಟೆಯವರೆಗೆ ಲಭ್ಯವಿದ್ದು, ಸಾರ್ವಜನಿಕರು ಭೇಟಿ ನೀಡಿ, ಇದರ ಸದುಪಯೋಗವನ್ನು ಪಡೆಯಬಹುದಾಗಿದೆ.