ಕಾರವಾರ: ತೀವ್ರ ಮಳೆಯಿಂದಾಗಿ ಮುನ್ನೆಚ್ಚರಿಕೆ ಕ್ರಮವಾಗಿ ನಾಳೆ ಕರಾವಳಿಯ ಐದು ತಾಲೂಕುಗಳಲ್ಲಿ ಎಲ್ಲ ಶಾಲಾ ಕಾಲೇಜುಗಳು ಹಾಗೂ ಜಿಲ್ಲೆಯ ಎಲ್ಲ ಅಂಗನವಾಡಿಗಳಿಗೆ ರಜೆ ಘೋಷಿಸುವಂತೆ ಜಿಲ್ಲಾಧಿಕಾರಿ ಡಾ.ಹರೀಶ್ ಕುಮಾರ್ ಕೆ. ಸಂಬಂಧಿಸಿದ ಇಲಾಖೆ ಮುಖ್ಯಸ್ಥರಿಗೆ ಸೂಚಿಸಿದ್ದಾರೆ.
ಕಾರವಾರ ಜಿಲ್ಲೆಯ ಎಲ್ಲ ಶಾಲೆಗಳಿಗೆ ರಜೆ ಘೋಷಿಸುವಂತೆ ಹಾಗೂ ನಾಳೆ ಶನಿವಾರದ ತರಗತಿಯನ್ನು ಬೇರೊಂದು ದಿನ ಸರಿದೂಗಿಸುವಂತೆ ಬಿಇಒಗಳಿಗೆ ಸೂಚಿಸಿ ಡಿಡಿಪಿಐ ಎನ್.ಜಿ.ನಾಯಕ್ ಆದೇಶಿಸಿದ್ದಾರೆ.
ಭಟ್ಕಳ ತಾಲೂಕಿನಾದ್ಯಂತ ಗಾಳಿ ಸಹಿತ ಭೀಕರ ಮಳೆ ಸುರಿಯುತ್ತಿದ್ದು ನಾಳೆಯೂ ಮಳೆ ಮುಂದುವರಿಯುವ ಕುರಿತು ಹವಾಮಾನ ಇಲಾಖೆಯು ಮುನ್ನೆಚ್ಚರಿಕೆ ನೀಡಿದ್ದು ಇರುತ್ತದೆ. ಕಾರಣ ಮುಂಜಾಗ್ರತಾ ಕ್ರಮವಾಗಿ ಮಾನ್ಯ ಸಹಾಯಕ ಆಯುಕ್ತರು ಹಾಗೂ ಮಾನ್ಯ ತಹಶೀಲ್ದಾರರು ಭಟ್ಕಳರವರ ಆದೇಶದಂತೆ ನಾಳೆ ದಿನಾಂಕ: 26-10-2019 ರಂದು ಶನಿವಾರ ಭಟ್ಕಳ ತಾಲೂಕಿನ ಎಲ್ಲಾ ಸರ್ಕಾರಿ, ಅನುದಾನಿತ, ಅನುದಾನ ರಹಿತ ಪ್ರಾಥಮಿಕ, ಪ್ರೌಢಶಾಲೆಗಳಿಗೆ ರಜೆಯನ್ನು ಘೋಷಿಸಲಾಗಿದೆ. ಈ ರಜೆಯ ಅವಧಿಯನ್ನು ಮುಂದಿನ ಶನಿವಾರ ಪೂರ್ಣದಿನ ತರಗತಿ ನಡೆಸಿ ಸರಿದೂಗಿಸುವುದು.