ಭಟ್ಕಳ: ಇಲ್ಲಿನ ಬಂದರ್ ರಸ್ತೆಯ 1ನೇ ಕ್ರಾಸ್ ನಲ್ಲಿರುವ ಮುಹಮ್ಮದ್ ಹುಸೇನ್ ಬೆಳ್ನಿ ಎಂಬುವವರ ಮನೆ ಕಳುವು ಮಾಡಲಾಗಿದ್ದು ಮನೆಯಲ್ಲಿದ್ದ ಯು.ಪಿ.ಎಸ್ ನ್ನು ಎತ್ತಿಕೊಂಡು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಮನೆಯ ಮಾಲಿಕರು ಕುಟುಂಬ ಸಮೇತರಾಗಿ ದುಬೈಯಲ್ಲಿ ವಾಸವಾಗಿದ್ದು ಅವರ ಸಂಬಂಧಿಕರು ಮನೆಯನ್ನು ನೋಡಿಕೊಳ್ಳುತ್ತಿದ್ದರು ಎಂದು ಹೇಳಲಾಗಿದ್ದು ದಿನಾಲು ಒಂದು ಬಾರಿ ಮನೆಯನ್ನು ನೋಡಿಕೊಂಡು ಹೋಗುತ್ತಿದ್ದರು. ಅದೇ ರೀತಿ ಭಾವನುವಾರದಂತೆ ಮನೆಯನ್ನು ನೋಡಲು ಹೋದಾಗ ಮನೆಯ ಹಿಂಬದಿ ಗಾಳಿ ಆಡಲು ಬಿಟ್ಟಿರುವ ಕಿಟಕಿಯ ಜಾಲಿಯನ್ನು ಮುರಿದಿ ಬಿದ್ದಿರುವುದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಮನೆಯ ಒಳಹೊಕ್ಕು ನೋಡಿದಾಗ ಮನೆಯಲ್ಲಿದ್ದ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿಕೊಂಡಿದ್ದು ಹಾಗೆಯೇ ಕಂಪ್ಯೋಟರ್ ಗೆ ಅಳವಡಿಸುವ ಯುಪಿಎಸ್ ಕಾಣೆಯಾಗಿರುವ ಕುರಿತು ಗಮನಕ್ಕೆ ಬಂದಿದೆ ಎಂದಿದೆ ಕುಟುಂಬ ಮೂಲಗಳು ತಿಳಿಸಿವೆ.
ಈ ಕುರಿತಂತೆ ಭಟ್ಕಳ ನಗರ ಪೊಲೀಸ್ ಠಾಣೆಯಲ್ಲ ದೂರು ನೀಡಲಾಗಿದೆ