ಭಟ್ಕಳ: ಮುಸ್ಲಿಮರ ಪವಿತ್ರ ರಮಝಾನ್ ಪ್ರಥಮ ಚಂದ್ರ ದರ್ಶನವು ಕೇರಳದ ಕಾಪಾಡ್ ನಲ್ಲಿ ಗುರುವಾರ ಆಗಿರುವುದರಿಂದ ಭಟ್ಕಳ ಸೇರಿದಂತೆ ದ.ಕ ಉಡುಪಿ ಜಿಲ್ಲೆಗಳಲ್ಲಿ ಶುಕ್ರವಾರದಿಂದ ರಮಝಾನ್ ಉಪವಾಸ ಆರಂಭವಾಗಲಿದೆ.
ಈ ಕುರಿತು ಗುರುವಾರ ಸಭೆ ನಡೆಸಿದ ಇಲ್ಲಿನ ಎರಡು ಜಮಾಅತ್ ನ ಪ್ರಧಾನ ಕಾಝಿಗಳಿ ಶುಕ್ರವಾರ ಉಪವಾಸ ಆರಂಭವನ್ನು ದೃಢಗೊಳಿಸಿದ್ದಾರೆ. ಇಲ್ಲಿನ ಜಮಾಅತುಲ್ ಮುಸ್ಲಿಮೀನ್ ಪ್ರಧಾನ ಖಾಝಿ ಮೌಲಾನ ಮುಹಮ್ಮದ್ ಇಕ್ಬಾಲ್ ಮುಲ್ಲಾ ನದ್ವಿ ಹಾಗೂ ಮರ್ಕಜಿ ಖಲಿಫಾ ಜಮಾಅತುಲ್ ಮುಸ್ಲಿಮೀನ್ ಪ್ರಧಾನ ಕಾಝಿ ಮೌಲಾನ ಕ್ವಾಜಾ ಮುಹಿದ್ದೀನ್ ಅಕ್ರಮಿ ನದ್ವಿ ಮದನಿ ಹೇಳಿಕೆ ನೀಡಿದ್ದಾರೆ. ಆದ್ದರಿಂದ ಗುರುವಾರದಿಂದಲೇ ರಮಾಝಾನ್ ನ ವಿಶೇಷ ಆರಾಧನೆಯಾಗಿರುವ ತರಾವಿಹ್ ನಮಾಝ್ ಆರಂಭಗೊಳ್ಳುತ್ತಿದ್ದು ತಮ್ಮ ತಮ್ಮ ಮನೆಯಲ್ಲಿ ನಮಾಝ್ ನಿರ್ವಹಿಸುವಂತೆ ಅವರು ಮನವಿ ಮಾಡಿಕೊಂಡಿದ್ದಾರೆ.