ಮುಂಡಗೋಡ; ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಕಳ್ಳರ ಕೈ ಚಳಕ

Source: sonews | By Staff Correspondent | Published on 18th November 2017, 11:44 PM | Coastal News | Don't Miss |

ಮುಂಡಗೋಡ: ಬಿಜೆಪಿ ಕಾರ್ಯಕರ್ತನೋರ್ವನ ಜೇಬಿನಿಂದ ಒಂದು ಲಕ್ಷ ಹಣ ಕದ್ದ ಕಳ್ಳರು ತಮ್ಮ ಕೈಚಳಕ ಪ್ರದರ್ಶಿಸಿದ ಘಟನೆ ಇತ್ತಿಚೆಗೆ ಮುಂಡಗೋಡದಲ್ಲಿ ಜರಗಿದ ಬಿಜೆಪಿಯ ಪರಿವರ್ತನ ಸಮಾವೇಶದ ಸಂದರ್ಭದಲ್ಲಿ ಜರಗಿದೆ.

ಹಣವನ್ನು ಕಳೆದುಕೊಂಡ ವ್ಯಕ್ತಿಯನ್ನು ತಾಲೂಕಿನ ಮಳವಳ್ಳಿ ಗ್ರಾಮದ ಮಂಜುನಾಥ್ ಎಂದು ಗುರುತಿಸಲಾಗಿದ್ದು ಈ ಕುರಿತಂತೆ ಪೊಲೀಸ್ ಠಾಣೆಯಲ್ಲಿ ದೂರೊಂದು ದಾಖಲಾಗಿದೆ.

ಜೋಳ ಮಾರಿ ಬಂದ ಒಂದು ಲಕ್ಷ ಹಣವನ್ನು ತಮ್ಮ ಜೇಬಿನಲ್ಲಿ ಇಟ್ಟುಕೊಂಡು ಬಂದಿದ್ದ ಮಂಜುನಾಥ್ ಯಡ್ಯೂರಪ್ಪರ ಫೋಟು ಕ್ಲಿಕ್ಕಿಸುವ ಸಂದರ್ಭದಲ್ಲಿ ಕಳ್ಳರು ಜೇಬಿಗೆ ಕತ್ತರಿಯನ್ನು ಹಾಕಿ ತಮ್ಮ ಕೈಚಳಕ ಪ್ರದರ್ಶಿಸಿದ್ದಾರೆ. ಹಣ ಕಳೆದುಕೊಂಡ ವ್ಯಕ್ತಿ ಸಮಾವೇಶದ ಸ್ಥಳದಲ್ಲಿ ಜೋರಾಗಿ ಅಳುತ್ತ ನಿಂತಿದ್ದು ಸಮಾವೇಶಕ್ಕೆ ಬಂದ ಜನರ ಗಮನ ಸೆಳೆಯುವಂತೆ ಮಾಡಿತ್ತು.

 

 

Read These Next

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...