ಮುಂಡಗೋಡ: ಮನೆಯಲ್ಲಿ ಕಳ್ಳತನ ಮಾಡಿದ್ದ ಆರೋಪಿಯ ಬಂಧನ

Source: nazir | By Arshad Koppa | Published on 10th October 2017, 8:39 AM | Coastal News |

ಮುಂಡಗೋಡ : ಸೆ. 9 ರಂದು ಇಂದೂರ ಗ್ರಾಮದ ಮನೆಯೊಂದರಲ್ಲಿ ಕಳ್ಳತನ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂದಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ
ಬಂದಿತ ಆರೋಪಿಯನ್ನು ಇಂದೂರ ಗ್ರಾಮದ ಸಹದೇವ ಮುದ್ದಿನಕೊಪ್ಪ ಎಂದು ತಿಳಿದು ಬಂದಿದೆ
ಸೆ.9 ರಂದು ಇಂದೂರ ಗ್ರಾಮದ ಶಿವಯ್ಯ ಸುರಗೀಮಠ(32) ಎಂಬುವರ ಮನೆಯ ಹಂಚು ತೆಗೆದು ಮನೆಲ್ಲಿಟ್ಟಿದ್ದ 41 ಗ್ರಾಂ ದ ಬಂಗಾರದ ಆಭರಣಗಳನ್ನು ಯಾರೋ ಕಳ್ಳರು ಕದ್ದು ಕೊಂಡು ಹೋಗಿರುತ್ತಾರ. ಈ  ಘಟನೆ ಸೆ.8 ರಂದು ಬೆಳಗ್ಗೆ 8.30 ರಿಂದ ಸೆ.9 ರ ಸಾಯಂಕಾಲ 4.30 ಗಂಟೆಗೆ ನಡೆದಿರಬಹುದು ಯಾರೋ ಕಳ್ಳರು ಮನೆಯ ಹಂಚು ತೆಗೆದು ಒಳಹೊಕ್ಕು ಕಳುಮಾಡಿಕೊಂಡು ಹೋಗಿರುತ್ತಾರೆ ಎಂದು ಪೊಲೀಸ ಠಾಣೆಯಲ್ಲಿ ದೂರ ದಾಖಲಾಗಿತ್ತು.


ಸಹದೇವ ಮುದ್ದಿನಕೊಪ್ಪ ನ ಮೇಲೆ ಪೊಲೀಸರು ಒಂದು ನಿಗಾ ಇಟ್ಟಿದ್ದರು ಆತನ ಚಲನವಲನ ಕುರಿತು ಭಾತ್ಮೀ ದಾರ ನೀಡಿದ ಸುಳಿವಿನಂತೆ ಆತನನ್ನು ವಿಚಾರಣೆಗೊಳಪಡಿಸಿದಾಗ ಸಹದೇವ ತಾನು ಕಳುಮಾಡಿರುವುದಾಗಿ ಹಾಗೂ ಆಭರಣಗಳನ್ನು ಶಿರ್ಶಿ ಅರ್ಬನ್ ಬ್ಯಾಂಕ್ ನಲ್ಲಿ ಅಡವಿಟ್ಟು ಹಣ ಪಡೆದಿರುವುದಾಗಿ ತಿಳಿಸಿದ ಮಾಹಿತಿಯಂತೆ ಬ್ಯಾಂಕ್ ಗೆ ಬಂದು ಮಾಹಿತಿ ಹಾಗೂ ಸಹದೇವ ಅಡವಿಟ್ಟ ಬಂಗಾರದ ಆಭರಣಗಳಾದ ಬಂಗಾರದ ಬ್ರಾಸ್‍ಲೈಟ್, ಒಂದು ದೊಡ್ಡ ಉಂಗರು, ಬಂಗಾರದ ಗಣಪತಿ ಲಾಕೇಟ್,ಬಂಗಾರದ ಸ್ವಸ್ತಿ ಚಿತ್ರವಿರುವ ಲಾಕೇಟ್ ಒಟ್ಟು ಸುಮಾರು 60 ಸಾವಿರ ರೂ ಮೌಲ್ಯದ ಬಂಗಾರದ ಆಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿರುತ್ತಾರೆ.
ಡಿಎಸ್‍ಪಿ ನಾಗೇಶ ಶೆಟ್ಟಿ ಮಾರ್ಗದರ್ಶನಲ್ಲಿ ಇನ್ಸಪೇಕ್ಟರ ಕಿರಣಕುಮಾರ ನಾಯಕ ನೇತೃತ್ವದಲ್ಲಿ ಪಿಎಸ್‍ಆಯ್ ಲಕಪ್ಪ ನಾಯಕ್ ಕ್ರೈಂ ಬ್ರಾಂಚ್ ಎ.ಎಸ್‍ಆಯ್ ಅಶೋಕ ರಾಠೋಡ, ಪೇದೆಗಳಾದ ಶಿವರಾಜ ಚೌಹಾಣ, ಅನ್ವರ ಖಾನ ಕಳ್ಳನನ್ನು ಮಾಲು ಸಮೇತ ಹಿಡಿಯಲಾಯಿತು

Read These Next

ಬೀಫ್ ಎಕ್ಸ್‌ಪೋರ್ಟ್ ಕಂಪನಿ ಸೇರಿದಂತೆ ಪಾಕಿಸ್ತಾನಿ ಏಜೆನ್ಸಿಗಳಿಂದಲೂ ಬಿಜೆಪಿ ದೇಣಿಗೆ ತೆಗೆದುಕೊಂಡಿದೆ- ಭಟ್ಕಳದಲ್ಲಿ ಕಾಂಗ್ರೆಸ್ ಸುದ್ದಿಗೋಷ್ಠಿ

ಭಟ್ಕಳ:  ಗೋಹತ್ಯೆ ವಿರೋಧಿಸುವ ಬಿಜೆಪಿ ಬೀಫ್ ರಫ್ತು ಮಾಡುವ ಕಂಪನಿ ಸೇರಿದಂತೆ ಪಾಕಿಸ್ಥಾನಿ ಎಜೆನ್ಸಿಗಳಿಂದಲೂ ದೇಣಿಗೆ ...

ಪ್ರಜಾಧ್ವನಿ ಸಮಾವೇಶ: ಭಟ್ಕಳದಿಂದ ಕುಮಟಾ ದ ವರೆಗೆ ಬೈಕ್ ರ್ಯಾಲಿ ಮೂಲಕ ಶಕ್ತಿ ಪ್ರದರ್ಶನ

ಕುಮಟಾ: ಪಟ್ಟಣದ ಮಣಕಿ ಮೈದಾನದಲ್ಲಿ ಆಯೋಜನೆಗೊಂಡಿದ್ದ ಪ್ರಜಾಧ್ವನಿ- 2 ಸಮಾವೇಶಕ್ಕೂ ಪೂರ್ವ ಬೃಹತ್ ಬೈಕ್ ರ್ಯಾಲಿ ಮೂಲಕ ಕರಾವಳಿಯಲ್ಲಿ ...