ಮೂಡುಬಿದ್ರಿ, ಜೂನ್ ೧೨: ಮೂಡಬಿದ್ರೆಯ ಕೋಟೆಬಾಗಿಲು ಪ್ರದೇಶದ ನಿವಾಸಿಯಾಗಿರುವ ಖೈರುನ್ನೀಸಾರವರಿಗೆ ಮೂವರು ಹೆಣ್ಣು ಮಕ್ಕಳು. ಆದರೆ ಹುಟ್ಟಿದ ಮೂರೂ ಮಕ್ಕಳು ಹೆಣ್ಣಾದವು ಎಂಬ ಕಾರಣವನ್ನೇ ನೀಡಿ ಈಕೆಯ ಪತಿ ಹೇಳದೇ ಕೇಳದೇ ಸಂಸಾರವನ್ನು ತ್ಯಜಿಸಿ ನಾಪತ್ತೆಯಾಗಿ ಕೆಲವೇ ವರ್ಷಗಳಾಗಿವೆ. ಆತ ಹಿಂದಿರುಗಿ ಬರುವ ಯಾವ ಸೂಚನೆಗಳೂ ಸಧ್ಯಕ್ಕೆ ಕಾಣುತ್ತಿಲ್ಲ.
ಪತಿಯ ಆಸರೆಯಿಲ್ಲದೇ ಈಕೆ ತನ್ನ ಮೂವರೂ ಮಕ್ಕಳನ್ನು ಓದಿಸಲು ಅಕ್ಕಪಕ್ಕದ ಮನೆಗಳಲ್ಲಿ ಮನೆಕೆಲಸ ಮಾಡಿಕೊಂಡು ದಿನದೂಡುತ್ತಿದ್ದಾರೆ. ಕೋಟೆಬಾಗಿಲಿನಲ್ಲಿರುವ ಪುಟ್ಟ ನಿವೇಶನವೇ ಅವರ ಸಕಲ ಆಸ್ತಿಯಾಗಿದ್ದು ತನ್ನ ಮಕ್ಕಳು ಉತ್ತಮ ಜೀವನ ಸಾಗಿಸಬೇಕೆಂಬ ಬಯಕೆಯಿಂದ ಅವರನ್ನು ಎಲ್ಲಿಯೂ ಕೆಲಸಕ್ಕೆ ಕಳುಹಿಸದೇ ಶಾಲೆಗೆ ಕಳುಹಿಸುತ್ತಿದ್ದಾರೆ. ಈ ನಿವೇಶನದಲ್ಲಿ ಕಷ್ಟಪಟ್ಟು, ಸಾಲ ಮಾಡಿ ಮುರುಕು ಮನೆಯೊಂದನ್ನು ನಿರ್ಮಿಸಿದ್ದಾರೆ. ಆದರೆ ಹಣದ ಮುಗ್ಗಟ್ಟಿನಿಂದ ಅರ್ದಂಬರ್ಧ ಕಟ್ಟಿರುವ ಈ ಮನೆಯನ್ನು ಮನೆಯೆಂದೇ ಹೇಳಲು ಸಾಧ್ಯವಾಗುತ್ತಿಲ್ಲ. ಕೆಳಗಿನ ಚಿತ್ರಗಳಲ್ಲಿ ಇದನ್ನು ಸ್ವತಃ ನೋಡಬಹುದು.
ಈ ಪವಿತ್ರ ರಮಧಾನ್ ತಿಂಗಳಲ್ಲಿ ಈ ಬಡ ಮಹಿಳೆಯ ಮನೆ ಉಳಿಸಿಕೊಳ್ಳಲು ಸಹಾಯ ಮಾಡಲು ಈ ಮೂಲಕ ವಿನಂತಿಸಿಕೊಳ್ಳುತ್ತಿದ್ದೇವೆ. ಈಕೆಯ ಮನೆಯನ್ನು ಸ್ವತಃ ನೋಡಿ ಈಕೆ ನಿಜವಾಗಿಯೂ ನೆರವು ಪಡೆಯಲು ಅರ್ಹಳು ಎಂದು ಮೂಡಬಿದ್ರೆಯ ನಿವಾಸಿ ಜನಾಬ್ ಮಕ್ಬೂಲ್ ಹುಸೇನ್ ರವರು ಖಚಿತಪಡಿಸಿದ್ದಾರೆ. ದಾನಿಗಳು ತೆರೆದ ಹೃದಯದಿಂದ ಈಕೆಗೆ ಸಾಧ್ಯವಾದಷ್ಟು ಮಟ್ಟಿಗೆ ನೆರವು ನೀಡುವಂತೆ ಪಾರ್ಥಿಸುತ್ತೇವೆ.
Bank account details:
Mrs. Kairunnisa
State bank of India
Moodbidri-574227
SB -A/C no. 3069 2151 083
IFSC code: SBIN0005623
ಹೆಚ್ಚಿನ ವಿವರಗಳಿಗೆ:
ಜನಾಬ್. ಮಕ್ಬೂಲ್ ಹುಸೇನ್. 0091 - 98 45 25 2874.