ಭಟ್ಕಳದಲ್ಲಿ ಮುಸ್ಲಿಮರಿಂದ ಈದ್ ಮಿಲಾದುನ್ನಬಿ ಆಚರಣೆ

Source: S O News | By MV Bhatkal | Published on 28th September 2023, 9:33 PM | Coastal News | Don't Miss |

ಭಟ್ಕಳ: ಇದರ ಫೈಜೂರ್ ರಸೂಲ್ ಭಟ್ಕಳ, ಬಜ್ಮೆ ಫೈಜುರ್ ರಸೂಲ್ ಭಟ್ಕಳ,ಇದರ ವತಿಯಿಂದ ಗುರುವಾರ ನಗರದ ವಿವಿಧ ಭಾಗಗಳ ಮುಸ್ಲಿಮ್ ಧರ್ಮೀಯರು ಪ್ರವಾದಿ ಮಹ್ಮದ್‌ ಪೈಗಂಬರರ ಹುಟ್ಟು ಹಬ್ಬದ ಅಂಗವಾಗಿ ಸಡಗರ ಸಂಭ್ರಮದೊಂದಿಗೆ ಮೆರವಣಿಗೆ ನಡೆಸಿದರು.

ಈದ್ಗಾ ಮೈದಾನದಿಂದ ಆರಂಭಗೊಂಡ ಮೆರವಣೆಗೆಯು ಶಮ್ಸುದ್ದೀನ್ ವೃತ್ತದ ಮೂಲಕ ಪಿಎಲ್‌ ಡಿ ಬ್ಯಾಂಕ್‌ ವೃತ್ತ, ಹಳೆಬಸ್ ನಿಲ್ದಾಣ, ಸುಲ್ತಾನ್ ಸ್ಟ್ರೀಟ್, ಚೌಕ್ ಬಜಾರ್, ಮಾರುಕಟ್ಟೆ ಮಾರ್ಗವಾಗಿ ಹಳೆಬಸ್‌ ನಿಲ್ದಾಣ ಪಕ್ಕದ ಪಬ್ಲಿಕ್ ಚಬೂತ್ರ ಮೈದಾನದಲ್ಲಿ ಅಂತ್ಯ ಕಂಡಿತು.

ನೂರಾರು ಶ್ವೇತ ವಸ್ತ್ರಧಾರಿ ಮುಸ್ಲಿಮ್ ಧರ್ಮೀಯರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಮೆರವಣಿಗೆಯುದ್ದಕ್ಕೂ ಪ್ರವಾದಿಯ ಹೆಸರಿನಲ್ಲಿ ಜಯಘೋಷಗಳು ಮೊಳಗಿದವು. ಪ್ರವಾದಿ ಗುಣಗಾನದ ಗೀತೆಗಳು, ದಫ್ ವಾದನ, ಕುಣಿತ ಜನರ ಗಮನ ಸೆಳೆದವು.  

ಈ ಸಂದರ್ಭದಲ್ಲಿ ಮರ್ಕಝೀ ಈದ್ ಮೀಲಾದ್ ಕಮಿಟಿಯ ಆಧ್ಯಕ್ಷ ಮುನೀರ್ ಅಹ್ಮದ್, ಸೆಕ್ರಟರಿ ಖಾಜಾ ಹಸನ್ ಕಲೈವಾಲಾ, ಮೆಹಬೂಬ್ ಅಲಿ, ಆಸೀಫ್ ಕಲೈವಾಲಾ, ಇದ್ರಿಸ್ ಮೊಹತೆಶ್ಯಾಮ್, ಮೌಲನಾ ಜುಪ್ರಿ ಅಕ್ರಮಿ, ಮೌಲಾನಾ ಫೈಜಾನ ರಝಾ, ಸೈಯದ್ ಅಲ್ವಿ ಕರ್ಕಿ ತಂಗಳ, ಅಬ್ದುಲ್ ಅಲಿಂ ಗವಾಯಿ, ಮೌಲಾನ ರೈಸ್ ಆಕ್ರಮಿ, ಮೌಲಾನ ಆಮೀನ್ ಅಕ್ರಾಮಿ, ನವಾಜ್ ಭಟ್ಕಳ, ಎಸ್.ಎಸ್.ಎಫ್ ಪ್ರಮುಖರು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಮೆರವಣಿಗೆಯಲ್ಲಿ ನೂರಾರು ಮಂದಿ ಯುವಕರು ಪಾಲ್ಗೊಂಡಿದ್ದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಸೇರಿದಂತೆ ವಿಷ್ಣುವರ್ಧನ್, ಡಿವಾಯ್‌ ಎಸ್ಪಿ ಕೆ ಶ್ರೀಕಾಂತ್ ಮಾರ್ಗದರ್ಶನದಲ್ಲಿ ನಗರ ಠಾಣೆ ಸಿಪಿಐ ಗೋಪಿ ಕೃಷ್ಣ, ಗ್ರಾಮೀಣ ಠಾಣೆ ಸಿಪಿಐ ಚಂದನ ಗೋಪಾಲ, ನಗರ ಠಾಣೆ ಪಿಎಸ್ ಗಳಲಾದ ಶಿವಾನಂದ ನಾವುದಿ, ಶ್ರೀಕಾಂತ್ ರಾಥೋಡ್, ಯಲಪ್ಲ ಮಾದರ್, ಮುರುಡೇಶ್ವರ ಠಾಣೆ ಪಿ.ಎಸ್.ಐ ಶಿವಕುಮಾರ್, ಮಂಕಿ ಠಾಣೆ ಪಿ.ಎಸ್.ಐ ಭರತ ಕುಮಾರ, ಗೋಕರ್ಣ ಠಾಣೆ ಪಿ.ಎಸ್.ಐ ರವೀಂದ್ರ ಬಿರಾದಾರ ನೆತ್ವದಲ್ಲಿ ಮೆರವಣಿಗೆಯುದ್ದಕ್ಕೂ ಬಿಗಿಯಾಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

 

Read These Next

ಕಾರವಾರ: ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ತಿಂಗಳಿಗೆ ಹತ್ತೂವರೆ ಸಾವಿರ: ಸೈಲ್

ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರವನ್ನ ಗೆಲ್ಲಿಸಿದರೆ ತಿಂಗಳಿಗೆ ಹತ್ತೂವರೆ ಸಾವಿರ ಬಡ ಮಹಿಳೆಯರ ಖಾತೆಗೆ ಬರಲಿದೆ. ಈ ಅವಕಾಶವನ್ನ ...

ಭಟ್ಕಳದ ಅಂಜುಮಾನ್ ಇಂಜಿನಿಯರಿಂಗ್ ಕಾಲೇಜು ಗುಡ್ಡದ ಮೇಲಿನ ಸ್ವರ್ಗ - ಡಾ. ದಿನೇಶ್ ಗಾಂವ್ಕರ್

೨೦೨೪- ಶಿಕ್ಷಕ ಶೀರ್ಷಿಕೆ ಅಡಿಯಲ್ಲಿ ಅಂಜುಮಾನ್ ತಾಂತ್ರಿಕ ವಿದ್ಯಾಲಯದಲ್ಲಿ ಕನ್ನಡ ವೇದಿಕೆಯ ಕಾರ್ಯಕ್ರಮವನ್ನು ವಿದ್ಯಾರ್ಥಿಗಳು ...