ನೇಣು ಬಿಗಿದು ಆತ್ಮಹತ್ಯೆಗೆ ಶರಣು

Source: sonews | By Staff Correspondent | Published on 22nd July 2017, 11:08 PM | Coastal News | Don't Miss |

ನೇಣು ಬಿಗಿದು ಆತ್ಮಹತ್ಯೆಗೆ ಶರಣು
ಭಟ್ಕಳ: ನಗರದ  ಸಾಗರ ರಸ್ತೆಯನ ಮನೆಯೊಂದರಲ್ಲಿ  ವ್ಯಕ್ತಿಯೊಬ್ಬ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾನೆ. ದಾದಾ ಫೀರ್ ಖಾಸೀಮ್ ಸಾಬ್ ಮದರಸಾ(೫೮) ಎಂಬಾತನೇ ಆತ್ಮಹತ್ಯೆ ಮಾಡಿಕೊಂಡವನಾಗಿದ್ದು  ಈತನ ಮನೆಯವರು ಹುಬ್ಬಳ್ಳಿಯಿಂದ ಬಂದ ಮಗಳನ್ನು ವಾಪಾಸ್ ಕಳುಹಿಸಿಕೊಡಲು ಬಸ್ ನಿಲ್ದಾಣಕ್ಕೆ ಹೋದ ಸಂದರ್ಭವನ್ನೇ ಬಳಸಿಕೊಂಡು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. 
ಮನೆಯವರು ಬಸ್ ನಿಲ್ದಾಣದಿಂದ ವಾಪಾಸು ಬಂದು ಎಷ್ಟು ಬಾಗಿಲು ಬಡಿದರೂ ಬಾಗಿಲು ತೆರೆಯದಿದ್ದಾಗ ಹಿಂಬದಿಯ ಕಿಟಕಿಯಿಂದ ನೋಡಿದ್ದು ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದು ಬಂದಿತ್ತು. 
ನಗರ ಠಾಣೆಯ ಪಿ‌ಎಸೈ ಅಣ್ಣಪ್ಪ ಮೊಗೇರ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿದರು. ಈ ಕುರಿತು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
 

Read These Next

ಬೀಫ್ ಎಕ್ಸ್‌ಪೋರ್ಟ್ ಕಂಪನಿ ಸೇರಿದಂತೆ ಪಾಕಿಸ್ತಾನಿ ಏಜೆನ್ಸಿಗಳಿಂದಲೂ ಬಿಜೆಪಿ ದೇಣಿಗೆ ತೆಗೆದುಕೊಂಡಿದೆ- ಭಟ್ಕಳದಲ್ಲಿ ಕಾಂಗ್ರೆಸ್ ಸುದ್ದಿಗೋಷ್ಠಿ

ಭಟ್ಕಳ:  ಗೋಹತ್ಯೆ ವಿರೋಧಿಸುವ ಬಿಜೆಪಿ ಬೀಫ್ ರಫ್ತು ಮಾಡುವ ಕಂಪನಿ ಸೇರಿದಂತೆ ಪಾಕಿಸ್ಥಾನಿ ಎಜೆನ್ಸಿಗಳಿಂದಲೂ ದೇಣಿಗೆ ...