ಡಿವಾಯ್ಎಸ್ಪಿ ವೆಲೆಂಟೈನ್ಗೆ ತಂಜೀಮ್ನಿಂದ ಸನ್ಮಾನ
Source: S O News Service |
By I.G. Bhatkali |
Published on 4th September 2019, 11:20 AM |
Coastal News |
ಭಟ್ಕಳ: ರಾಷ್ಟ್ರಪತಿ ಸೇವಾ ಪದಕ ಪುರಸ್ಕøತ ಭಟ್ಕಳ ಡಿವಾಯ್ಎಸ್ಪಿ ವೆಲೆಂಟೈನ್ ಡಿಸೋಜಾರನ್ನು ಭಟ್ಕಳ ಮಜ್ಲಿಸೇ ಇಸ್ಲಾ ವ ತಂಜೀಮ್ ವತಿಯಿಂದ ತಂಜೀಮ್ ಕಚೇರಿಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಡಿವಾಯ್ಎಸ್ಪಿ ವೆಲೆಂಟೈನ್, ನನ್ನ ಬೆಳವಣಿಗೆಯಲ್ಲಿ ಭಟ್ಕಳದ ಪಾತ್ರ ಇದೆ. ಜನರ ಪ್ರೀತಿ ಸಹಕಾರದಿಂದ ಪ್ರತಿ ಹಂತದಲ್ಲಿಯೂ ಯಶಸ್ಸು ಲಭಿಸಿದೆ. ಭಟ್ಕಳದಲ್ಲಿ ಶಾಂತಿ ನೆಲೆಸುವಂತೆ ಮಾಡಲು ಎಲ್ಲ ತ್ಯಾಗಕ್ಕೂ ಪೊಲೀಸ್ ಇಲಾಖೆ ಸಿದ್ಧವಿದೆ ಎಂದರು. ಭಟ್ಕಳ ಸಹಾಯಕ ಆಯುಕ್ತ ಸಾಜೀದ್ ಮುಲ್ಲಾ ಮಾತನಾಡಿದರು. ಭಟ್ಕಳ ಮಜ್ಲಿಸೇ ಇಸ್ಲಾ ವ ತಂಜೀಮ್ ಅಧ್ಯಕ್ಷ ಎಸ್.ಎಮ್.ಫರ್ವೇಜ್, ಅತೀಕ್ ಉರ್ರೆಹೆಮಾನ್ ಮುನಿರಿ, ಇನಾಯಿತುಲ್ಲಾ ಶಾಬಂದ್ರಿ, ಹಾಶೀಮ್ ಭರಣಿ, ಜಾಫರ್ ಭರಣಿ, ಸಿದ್ದಿಕ್ ಡಿಎಫ್ ಮೊದಲಾದವರು ಉಪಸ್ಥಿತರಿದ್ದರು. ತಂಜೀಮ್ ಪ್ರಧಾನ ಕಾರ್ಯದರ್ಶಿ ಅಬ್ದುರ್ರಕೀಬ್ ಎಮ್.ಜೆ. ಪ್ರಾಸ್ತಾವಿಕವಾಗಿ ಮಾತನಾಡಿದರು. ಜೈಲಾನಿ ಶಾಬಂದ್ರಿ ವಂದಿಸಿದರು. ಹನೀಫ್ ಶಬಾಬ್ ಕಾರ್ಯಕ್ರಮ ನಿರೂಪಿಸಿದರು.