ಭಟ್ಕಳ: ಲಾರಿ ಬೈಕ್ ಅಪಘಾತ; ಸ್ಥಳದಲ್ಲೇ ಸಾವನ್ನಪ್ಪಿದ ಬೈಕ್ ಸವಾರ
ಭಟ್ಕಳ: ಲಾರಿ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೆ ಮೃತಪಟ್ಟಿರುವ ಘಟನೆ ಮಂಗಳವಾರ ಮಧ್ಯಾಹ್ನ ನವಾಯತ್ ಕಾಲೋನಿ ಬಳಿಯ ರಾ.ಹೆ.66ರಲ್ಲಿ ಜರಗಿದೆ.
ಮೃತ ಬೈಕ್ ಚಾಲಕನನ್ನು ಬೆಳ್ನಿಯ ನಿವಾಸಿ ನರಸಿಂಹ ಮೊಗೇರ್ (37) ಎಂದು ಗುರುತಿಸಲಾಗಿದೆ. ಮೃತ ಬೈಕ್ ಚಾಲಕ ಮೀನುಗಾರಿಕಾ ವೃತ್ತಿಯನ್ನು ಮಾಡಿಕೊಂಡಿದ್ದು ಮಂಗಳವಾರ ಶಿರಾಲಿಯಿಂದ ಭಟ್ಕಳಕ್ಕೆ ಬರುತ್ತಿರುವಾಗ ಈ ದುರ್ಘಟನೆ ಸಂಭವಿಸಿದೆ. ಸ್ಥಳಿಯರ ಸಹಕಾರದಿಂದ ಮೃತದೇಹವನ್ನು ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದು ಅಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.
ಮೃತ ವ್ಯಕ್ತಿಯ ಪುತ್ರಿ ಕಳೆದ ವರ್ಷ ಮರಣ ಹೊಂದಿದ್ದು ಇಂದು ಆಕೆಯ ವಾರ್ಷಿಕ ಕ್ರಿಯೆ ಮಾಡುವುದಿತ್ತು ಎಂದು ತಿಳಿದುಬಂದಿದೆ. ನಗರ ಪೊಲೀಸ್ ಠಾಣೆಯಲ್ಲ ಪ್ರಕಣ ದಾಖಲಾಗಿದೆ.