ಕುಮಟಾ:ತಾಲೂಕಿನ ದೇವರಹಕ್ಕಲಿನಲ್ಲಿ ಮನೆಬಳಕೆ ಸಿಲಿಂಡರ್ ಸ್ಫೋಟಿಸಿದ್ದು ಯಾವುದೇ ಜೀವನ ಹಾನಿ ಸಂಭವಿಸದೆ ಭಾರಿ ದುರಂತವೊಂದು ತಪ್ಪಿದಂತಾಗಿದೆ.
ದೇವರಹಕ್ಕಲಿನ ನಿವಾಸಿ ತನವೀರ ಶೇಕ್ ಅವರ ಮನೆಯಲ್ಲಿ ಶುಕ್ರವಾರ ಕುಟುಂಬದ ಸದಸ್ಯರು ನಮಾಝ್ ಗಾಗಿ ಮಸೀದಿಗೆ ತೆರಳಿದಾಗ ಈ ಘಟನೆ ಸಂಭವಿಸಿದ್ದು, ಮನೆಕೆಲಸದವರ ಸಮಯಪ್ರಜ್ಞೆಯಿಂದಾಗಿ ಭಾರಿ ದುರಂತವೊಂದು ತಪ್ಪಿದಂತಾಗಿದೆ ಎಂದು ಹೇಳಲಾಗುತ್ತಿದೆ.
ಘಟನೆ ನಡೆದ ತಕ್ಷಣವೇ ಮನೆಯ ಕೆಲಸಗಾರರು ತಕ್ಷಣ ಕುಮಟಾದ ಅಗ್ನಿಶಾಮಕ ದಳದವರಿಗೆ ಕರೆಮಾಡಿದ್ದಾರೆ ಆದರೆ ಅವರ ಮನೆಗೆ ಅಗ್ನಿ ಶಾಮಕದ ವಾಹನ ಹೊಗಲಿಕ್ಕೆ ಸರಿಯಾದ ರಸ್ತೆ ಇಲ್ಲದೆ ಇದ್ದಾಗ ಎರಡು ಚಕ್ರದ ಬುಲೆಟ್ ಬಂದು ಅಗ್ನಿಯನ್ನು ಆರಿಸಿದ್ದಾರೆ ಕುಮಟಾಕ್ಕೆ ಅಗ್ನಿಶಾಮಕ ದಳದ ಈ ಬೂಲೆಟ್ ನಿಂದ ಒಂದು ಕುಟುಂಬದ ಹಾಗು ಅಕ್ಕಪಕ್ಕದ ಮನೆಗಳಿಗೆ ಯಾವುದೆ ಹಾನಿ ಆಗದಂತೆ ಸಂಭವಿಸಲಿಲ್ಲ ಎಂದು ಹೇಳಲಾಗಿದೆ.