ಕಾರವಾರ: ಗುತ್ತಿಗೆ ಆಧಾರದಲ್ಲಿ ಕಾನೂನು ಸಲಹೆಗಾರರ ನೇಮಕ
ಕಾರವಾರ: ಜಿಲ್ಲಾಧಿಕಾರಿ ಕಾರ್ಯಾಲಯದಲ್ಲಿ ವಿವಿಧ ನ್ಯಾಯಾಲಯ ಪ್ರಕರಣ/ಕಡತಗಳಿಗೆ ಸಂಬAಧಿಸಿದAತೆ ಕಾನೂನು ಸಲಹೆ ನೀಡಲು ಕಾನೂನು ಪದವೀಧರರಾಗಿರುವ (ಎಲ್ಎಲ್ಬಿ) ಕಂದಾಯ ಇಲಾಖೆಯ ನಿವೃತ್ತ ವಿಶೇಷ ಜಿಲ್ಲಾಧಿಕಾರಿ, ನಿವೃತ್ತ ತಹಶೀಲ್ದಾರ್, ನಿವೃತ್ತ ಉಪ ತಹಶೀಲ್ದಾರ್ ಮತ್ತು ನಿವೃತ್ತ ಸಿವಿಲ್ ನ್ಯಾಯಾಧೀಶರನ್ನು ಗುತ್ತಿಗೆ ಆಧಾರದ ಮೇಲೆ ಒಂದು ವರ್ಷ ಅವಧಿಗೆ ನೇಮಕ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.
ಅರ್ಹ ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು ಸಂಪೂರ್ಣ ದಾಖಲಾತಿಗಳೊಂದಿಗೆ ಡಿ.1 ರೊಳಗಾಗಿ ಜಿಲ್ಲಾಧಿಕಾರಿಗಳ ಕಚೇರಿಗೆ ಸಲ್ಲಿಸಬಹುದು ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.