ಭಟ್ಕಳ: ಕಳ್ಳ ಭಟ್ಟಿ ಸಾರಾಯಿ ಮಾರಾಟ ಮಾಡುತ್ತಿದ್ದ ಆರೋಪದ ಮೇರೆಗೆ ಭಟ್ಕಳ ಅಬಕಾರಿ ಹಾಗೂ ಪೊಲೀಸ್ ಅಧಿಕಾರಿಗಳು ಜಂಟಿಯಾಗಿ ದಾಳಿ ನಡೆಸಿ ಓರ್ವ ಮಹಿಳೆಯನ್ನು ವಶಕ್ಕೆ ಪಡೆದಿರುವ ಘಟನೆ ತಾಲೂಕಿನ ಬೆಳಕೆಯಲ್ಲಿ ನಡೆದಿದೆ.
ಬಂಧಿತರನ್ನು ತಾಲೂಕಿನ ಬೆಳಕೆಯ ಸೋಡಿಗದ್ದೆ ಕೋಟಿಮನೆ ನಿವಾಸಿ ಹಿರಿಯಕ್ಕ ಮಂಜು ನಾಯ್ಕ ಎಂದು ಗುರುತಿಸಲಾಗಿದೆ. ಇವರಿಂದ ರೂ.1100 ಮೌಲ್ಯದ 11ಲೀ. ಕಳ್ಳಭಟ್ಟಿ ಸಾರಾಯಿಯನ್ನು ವಶಪಡಿಸಿಕೊಳ್ಳಲಾಗಿದೆ.
ಕಾರವಾರ ಅಬಕಾರಿ ಉಪಾಯುಕ್ತ ಮಂಜುನಾಥ ಮಾರ್ಗದರ್ಶನದಲ್ಲಿ ಭಟ್ಕಳ ಅಬಕಾರಿ ಇನ್ಸ್ಪೆಕ್ಟರ್ ಸುಬೋಧಾ ಸಿ. ನಾಯಕ, ಪಿಎಸ್ಐ ಜಿ.ಎಲ್.ಬೋರ್ಕರ್, ಭಟ್ಕಳ ಗ್ರಾಮೀಣ ಠಾಣಾ ಎಸೈ ರವಿ, ಸಿಬ್ಬಂದಿಗಳಾದ ದೀಪಾ, ಗುರುಪ್ರಸಾದ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.