ದುಬೈ. ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ಯು.ಎ.ಇ ಇದರ ಅದೀನ ಘಟಕವಾದ ಡಿ.ಕೆ.ಎಸ್.ಸಿ ಅಜ್ಮಾನ್ ಯುನಿಟ್ ಇದರ 18 ನೇ ಮಹಾ ಸಭೆಯು ಜನಾಬ್.ಹಸನಬ್ಬ ಕೊಳ್ನಾಡ್ ರವರ ನಿವಾಸದಲ್ಲಿ ಅವರ ಅಧ್ಯಕ್ಷತೆಯಲ್ಲಿ ಜನಾಬ್.ಹುಸೈನ್ ಜೋಕಟ್ಟೆ ರವರ ಕಿರಾಹತ್ ಹಾಗೂ ಸಯ್ಯದ್ ತ್ವಾಹ ಭಾಪಕಿ ತಂಘಳ್ ರವರ ದುವಾ ದೊಂದಿಗೆ ನಡೆಯಿತು. ಸಭೆಯನ್ನು ಯುನಿಟ್ ಗೌರವಾಧ್ಯಕ್ಷರಾದ ಜನಾಬ್.ಅಬೂಬಕ್ಕರ್ ಮದನಿ ಕೆಮ್ಮಾರ ರವರು ಉದ್ಘಾಟಿಸಿದರು. ಸಭೆಯಲ್ಲಿ ರಾಷ್ಟೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಆದ ಜನಾಬ್. ಇಕ್ಬಾಲ್ ಕಣ್ಣಂಗಾರ್ ರವರು ಚುನಾವಣಾದಿಕಾರಿಯಾಗಿ 2017-18 ರ ಸಾಲಿನ ನೂತನ ಸಮಿತಿಯನ್ನು ರಚಿಸಿದರು. ರಾಷ್ಟ್ರೀಯ ಸಮಿತಿ ಉಪಾಧ್ಯಕ್ಷರಾದ ಜನಾಬ್ ಅಬ್ದುಲ್ ಲತೀಫ್ ಮುಲ್ಕಿ ಯವರು ನೂತನ ಸಮಿತಿಗೆ ಶುಭಹಾರೈಸಿ ಮಾತನಾಡಿದರು. ಸಭೆಯಲ್ಲಿ ರಾಷ್ಟೀಯ ಸಮಿತಿ ಕೋಶಾಧಿಕಾರಿ ಹಾಜಿ.ಇಬ್ರಾಹಿಂ ಕಿನ್ಯ ,ಬಾರ್ ದುಬೈ ಯುನಿಟ್ ಅಧ್ಯಕ್ಷರಾದ ಜನಾಬ್. ಇಸ್ಮಾಯಿಲ್ ಬಾಬಾ ಮೂಳೂರು , ರಾಷ್ಟೀಯ ಸಮಿತಿಯ ಜನಾಬ್.ಇ.ಕೆ.ಇಬ್ರಾಹಿಂ ಕಿನ್ಯ , ಎಸ್.ಯೂಸುಫ್ ಅರ್ಲಪದವು, ಜನಾಬ್. ಅಬ್ಬಾಸ್ ಪಾಣಾಜೆ , ಜನಾಬ್, ರಜಾಕ್ ಮುಟಿಕಲ್ , ಜನಾಬ್ ಉಮ್ಮರ್ ಪಾಣಾಜೆ ಇನ್ನಿತರರು ಉಪಸ್ಥಿತರಿದ್ದರು. ಜನಾಬ್.ಸಂಶುದ್ದೀನ್ ಕುಂದಾಪುರ ಸ್ವಾಗತಿಸಿ ಜನಾಬ್.ನಜೀರ್ ಕಣ್ಣಂಗಾರ್ ವರದಿ ವಾಚಿಸಿ ಮುಸ್ತಫಾ ಕೊಳ್ನಾಡು ಲೆಕ್ಕಪತ್ರ ಮಂಡಿಸಿದರು. ಜನಾಬ್. ಹಾಜಿ ಅಬ್ದುಲ್ಲಾ ಬೀಜಾಡಿ ರವರು ಯುನಿಟ್ ನ ಕಾರ್ಯ ವೈಖರಿ ಬಗ್ಗೆ ವಿವರಿಸಿದರು. ಜನಾಬ್. ಅಶ್ರಫ್ ಕೊಳ್ನಾಡು ರವರು ಕಾರ್ಯಕ್ರಮ ನಿರ್ವಹಿಸಿದರು. ಸಭಾ ಕಾರ್ಯಕ್ರಮದ ನಂತರ ಅಸ್ಮಾಹುಲ್ ಉಸ್ನ ದಿಕ್ರ್ ಮಜ್ಲಿಸ್ ಸಯ್ಯದ್ ತ್ವಾಹ ಭಾಪಕಿ ತಂಘಳ್ , ಜನಾಬ್. ಅಬೂಬಕ್ಕರ್ ಮದನಿ ಕೆಮ್ಮಾರ ,ಜನಾಬ್.ಸಿದ್ದೀಕ್ ಅಮಾನಿ ರವರ ನೇತೃತ್ವದಲ್ಲಿ ನಡೆಯಿತು
2017 - 18 ರ ಸಾಲಿನ ನೂತನ ಸಮಿತಿ
ಗೌರವಾಧ್ಯಕ್ಷರು : ಜನಾಬ್. ಅಬೂಬಕ್ಕರ್ ಮದನಿ ಕೆಮ್ಮಾರ
ಸಲಹೆಗಾರರು : ಜನಾಬ್.ಸಿದ್ದೀಕ್ ಅಮಾನಿ
ಅದ್ಯಕ್ಷರು : ಜನಾಬ್. ಹಸನಬ್ಬ ಕೊಳ್ನಾಡು
ಉಪಾಧ್ಯಕ್ಷರು : ಜನಾಬ್.ಹಾಜಿ.ಬಿ.ಎಂ.ಅಬ್ದುಲ್ಲಾ ಬೀಜಾಡಿ, ಜನಾಬ್.ಅಪ್ತಾರ್ ಉಳ್ಳಾಲ
ಪ್ರದಾನ ಕಾರ್ಯದರ್ಶಿ : ಜನಾಬ್. ನಜೀರ್ ಕಣ್ಣಂಗಾರ್
ಜೊತೆ ಕಾರ್ಯದರ್ಶಿ : ಜನಾಬ್.ಶಬೀರ್ ಹಸನ್ ಕಾರ್ನಾಡ್, ಜನಾಬ್. ಮುಸ್ತಫಾ ಕೊಳ್ನಾಡು, ಜನಾಬ್.ಮುಹಮ್ಮದ್ ರಾಶೀದ್ ಕುವೆಂಜ
ಕೋಶಾದಿಕಾರಿ : ಜನಾಬ್. ಹಿದಾಯತ್ ತುಂಬೆ
ಲೆಕ್ಕ ಪರಿಶೋಧಕರು : ಜನಾಬ್.ಶಮೀರ್ ಕೊಳ್ನಾಡು
ಸಂಚಾಲಕರು : ಜನಾಬ್. ಇಬ್ರಾಹಿಂ ಕೇದಿಗೆ , ಜನಾಬ್. ಶಂಶುದ್ದೀನ್ ಕುಂದಾಪುರ , ಜನಾಬ್. ಆದಂ ಈಶ್ವರಮಂಗಿಲ , ಜನಾಬ್. ಝುಫುಕರ್ ಕೊಳ್ನಾಡು ಹಾಗೂ ಸದಸ್ಯರನ್ನು ಆಯ್ಕೆ ಮಾಡಲಾಯಿತು.