ಮುರ್ಡೇಶ್ವರ:ಮೀನು ಲಾರಿ ಕಾರು ಮುಖಾಮುಖಿ ಡಿಕ್ಕಿ ಒರ್ವ ಸ್ಥಳದಲ್ಲಿ ಸಾವು 

Source: sonews | By MV Bhatkal | Published on 10th September 2017, 8:59 PM | Coastal News | Don't Miss |

ಭಟ್ಕಳ: ಕೇರಳದಿಂದ ದೇವಸ್ಥಾನಗಳಿಗೆ ಬಂದಿದ್ದ ಕಾರೊಂದು ಮುರ್ಡೇಶ್ವರ ಬಸ್ತಿಯಲ್ಲಿ ಲಾರಿಗೆ ಡಿಕ್ಕಿಯಾದ ಪರಿಣಾಮ ಕಾರಿನಲ್ಲಿದ್ದ ಓರ್ವರು ಮೃತ ಪಟ್ಟು ಮೂವರು ಗಾಯಗೊಂಡಿರುವ ಘಟನೆ ನಡೆದಿದೆ. 
ಕೇರಳದಿಂದ ಎರಡು ಕಾರುಗಳಲ್ಲಿ ದೇವಸ್ಥಾನಗಳಿಗೆ ಬಂದಿದ್ದ ತಂಡ ಕೊಲ್ಲೂರಿಗೆ ಹೋಗಿ ಅಲ್ಲಿಂದ ಮುರ್ಡೇಶ್ವರಕ್ಕೆ ಬಂದಿದೆ.  ಮುರ್ಡೇಶ್ವರದಿಂದ ವಾಪಾಸು ಹೋಗುತ್ತಿರುವ ಸಂದರ್ಭದಲ್ಲಿ ಬಸ್ತಿಯಲ್ಲಿ ಕಾರು ಮತ್ತು ಲಾರಿಯ ನಡುವೆ ಮುಖಾ ಮುಖಿ ಡಿಕ್ಕಿಯಾದ ಪರಿಣಾಮ ಕಾರಿನಲ್ಲಿ ಹಿಂಬದಿಯಲ್ಲಿ ಕುಳಿತಿದ್ದ  ಭಾಸ್ಕರನ್ (70) ಎನ್ನುವವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.  ಕಾರಿನ ಚಾಲಕ ಸರೀಶ್ (34), ಹಾಗೂ ಪ್ರಯಾಣಿಕ ರವೀಂದ್ರನ್ (65) ಹಾಗೂ ಶೆಜು (40) ಗಂಭೀರ ಗಾಯಗೊಂಡಿದ್ದು ಪ್ರಥಮ ಚಿಕಿತ್ಸೆಯನ್ನು ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಡಿಕ್ಕಿಯ ರಭಸಕ್ಕೆ ಕಾರಿನ ಮುಂಬಾಗ ಸಂಪೂರ್ಣ ಜಖಂ ಗೊಂಡಿದೆ. ಸ್ಥಳಕ್ಕೆ ಸಿ.ಪಿ.ಐ. ಸುರೇಶ ನಾಯಕ ಭೇಟಿ ನೀಡಿ ಮಾಹಿತಿ ಪಡೆದರು. ಇನ್ನೋಂದು ಕಾರು ಇದರ ಹಿಂದೆಯೇ ಬರುತ್ತಿದ್ದು ಡಿಕ್ಕಿಯಾಗಿದ್ದನ್ನು ಕಣ್ಣಾರೆ ಕಂಡ ಅವರಿಗೆ ಮಾತೇ ಹೊರಡದಂತಾಗಿದೆ.  ಎರಡೂ ಕಾರಿನಲ್ಲಿದ್ದವರು ಪರಸ್ಪರ ಸಂಬಂಧಿಕರು ಎಂದೂ ತಿಳಿದು ಬಂದಿದೆ. ಮುರ್ಡೇಶ್ವರ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

 

Read These Next

ಬೀಫ್ ಎಕ್ಸ್‌ಪೋರ್ಟ್ ಕಂಪನಿ ಸೇರಿದಂತೆ ಪಾಕಿಸ್ತಾನಿ ಏಜೆನ್ಸಿಗಳಿಂದಲೂ ಬಿಜೆಪಿ ದೇಣಿಗೆ ತೆಗೆದುಕೊಂಡಿದೆ- ಭಟ್ಕಳದಲ್ಲಿ ಕಾಂಗ್ರೆಸ್ ಸುದ್ದಿಗೋಷ್ಠಿ

ಭಟ್ಕಳ:  ಗೋಹತ್ಯೆ ವಿರೋಧಿಸುವ ಬಿಜೆಪಿ ಬೀಫ್ ರಫ್ತು ಮಾಡುವ ಕಂಪನಿ ಸೇರಿದಂತೆ ಪಾಕಿಸ್ಥಾನಿ ಎಜೆನ್ಸಿಗಳಿಂದಲೂ ದೇಣಿಗೆ ...