ಬೈಕಿನಿಂದ ಬಿದ್ದು ಯುವತಿ ಸಾವು ; ಸೋಮವಾರ ಮಾರುಕೇರಿಯಲ್ಲಿ ನಡೆದ ಘಟನೆ

Source: sonews | By Staff Correspondent | Published on 8th July 2019, 6:52 PM | Coastal News | Don't Miss |

•    ಮಳೆಯಿಂದ ರಕ್ಷಣೆ ಹೊಂದಲು ಕೊಡೆ ಬಿಚ್ಚಿದ್ದೇ ಯುವತಿ ಸಾವಿಗೆ ಕಾರಣ

ಭಟ್ಕಳ: ಬೈಕಿನಿಂದ ಬಿದ್ದ ಯುವತಿಯೋರ್ವಳು ತಲೆಗೆ ಬಲವಾದ ಪೆಟ್ಟು ಬಿದ್ದ ಕಾರಣ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಘಟನೆ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಮಾರುಕೇರಿ ಗ್ರಾಮದಲ್ಲಿ ಸೋಮವಾರ ನಡೆದಿದೆ.

ಮೃತ ಯುವತಿಯನ್ನು ತಾಲೂಕಿನ ಜಾಲಿ ಪ.ಪಂ ನಿವಾಸಿ ಹಾದಿಯಮ್ಮ ತಿಮ್ಮಪ್ಪಗೊಂಡಾ(28) ಎಂದು ಗುರುತಿಸಲಾಗಿದೆ. 

ಇವರು ಮಾರುಕೇರಿಯಲ್ಲಿರುವ ತನ್ನ ಅಜ್ಜಿ ಮನೆಯಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಸೋಮವಾರ ಬೆಳಿಗ್ಗೆ ತನ್ನ ಸಹೋದರ ಮಾವನ ಬೈಕ್ ನಲ್ಲಿ ಭಟ್ಕಳದ ಕಡೆಗೆ ಬರುತ್ತಿರುವಾಗ ಮಾರೂಕೇರಿ ಶಾಲೆಯ ಬಳಿ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ. 

ಭಟ್ಕಳದ ಮೆಡಿಕಲ್ ಶಾಪ್ ಒಂದರಲ್ಲಿ ಕೆಲಸ ಮಾಡಿಕೊಂಡಿದ್ದ ಇವರು ಇಂದು ಮಾರುಕೇರಿಯಿಂದ ತನ್ನ ಮಾವನೊಂದಿಗೆ ಬೈಕ್ ನಲ್ಲಿ ಬರುತ್ತಿರುವಾಗ ಮಳೆಯಿಂದ ರಕ್ಷಣೆ ಹೊಂದಲು ಕೊಡೆಯನ್ನು ಬಿಚ್ಚಿದ್ದಾರೆ. ಇಂದು ಬೆಳಿಗ್ಗೆಯಿಂದಲೆ ತಾಲೂಕಿನಾದ್ಯಂತ ಬಿರುಗಾಳಿಯಿಂದ ಕೂಡಿದ ಮಳೆ ಸುರಿಯುತ್ತಿದ್ದು ಗಾಳಿಯ ರಭಸಕ್ಕೆ ಕೊಡೆ ಹಾರಿದ ಪರಿಣಾಮ ಹಿಮ್ಮುಖವಾಗಿ ಬೈಕ್ ನಿಂದ ಕೆಳಗೆ ಬಿದ್ದಿದ್ದಾರೆ. ಕೂಡಲೆ ಆಕೆಯನ್ನು ಭಟ್ಕಳದ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಯಿತಾದರೂ ತಲೆಗೆ ಬಲವಾದ ಪೆಟ್ಟು ಬಿದ್ದ ಪರಿಣಾಮ ಆಸ್ಪತ್ರೆಯಲ್ಲೇ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ. 

Read These Next

ಕಾರವಾರ: ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ತಿಂಗಳಿಗೆ ಹತ್ತೂವರೆ ಸಾವಿರ: ಸೈಲ್

ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರವನ್ನ ಗೆಲ್ಲಿಸಿದರೆ ತಿಂಗಳಿಗೆ ಹತ್ತೂವರೆ ಸಾವಿರ ಬಡ ಮಹಿಳೆಯರ ಖಾತೆಗೆ ಬರಲಿದೆ. ಈ ಅವಕಾಶವನ್ನ ...

ಭಟ್ಕಳದ ಅಂಜುಮಾನ್ ಇಂಜಿನಿಯರಿಂಗ್ ಕಾಲೇಜು ಗುಡ್ಡದ ಮೇಲಿನ ಸ್ವರ್ಗ - ಡಾ. ದಿನೇಶ್ ಗಾಂವ್ಕರ್

೨೦೨೪- ಶಿಕ್ಷಕ ಶೀರ್ಷಿಕೆ ಅಡಿಯಲ್ಲಿ ಅಂಜುಮಾನ್ ತಾಂತ್ರಿಕ ವಿದ್ಯಾಲಯದಲ್ಲಿ ಕನ್ನಡ ವೇದಿಕೆಯ ಕಾರ್ಯಕ್ರಮವನ್ನು ವಿದ್ಯಾರ್ಥಿಗಳು ...