ನೋಟು ಅಮಾನ್ಯೀಕರಣ ವಿಷಯದಲ್ಲಿ ರಾಷ್ಟ್ರಪತಿಗಳ ಹಸ್ತಕ್ಷೇಪಕ್ಕೆ ಕಾಂಗ್ರೇಸ್ ಆಗ್ರಹ

Source: sonews | By Staff Correspondent | Published on 8th November 2017, 7:36 PM | Coastal News | Don't Miss |

ಭಟ್ಕಳ: ದೇಶದ ಆರ್ಥಿಕತೆಯನ್ನು ಬುಡಮೇಲುಗೊಳಿಸುವ ನೋಟು ಅಮಾನ್ಯೀಕರಣಗೊಂಡು ಒಂದು ವರ್ಷ ಪೂರ್ಣಗೊಂಡಿದ್ದು ಇದು ಕೇಂದ್ರ ಸರ್ಕಾರದ ಅಸಂಜಸ ಕ್ರಮವಾಗಿದ್ದು ಇದಕ್ಕೆ ಸಂಬಂಧಿಸಿದಂತೆ ರಾಷ್ಟ್ರಪತಿಗಳು ಹಸ್ತಕ್ಷೇಪ ಮಾಡಬೇಕೆಂದು ಆಗ್ರಹಿಸಿ ಭಟ್ಕಳ ಬ್ಲಾಕ್ ಕಾಂಗ್ರೇಸ್ ಬುಧವಾರ ಸಯಾಯಕ ಆಯುಕ್ತರ ಮೂಲಕ ರಾಷ್ಟ್ರಪತಿಗಳಿಗೆ ಮನವಿಪತ್ರವನ್ನು ಅರ್ಪಿಸಲಾಯಿತು. 
     
2016 ನವೆಂಬರ್ 8ರಂದು ಭಾರತದ ಪ್ರಧಾನಿ ನರೇಂದ್ರ ಮೋದಿಯವರು ದಿಢೀರ್ ಎಂದು 500ರೂ. ಮತ್ತು 1000ರೂ. ಮುಖಬೆಲೆಯ ನೋಟುಗಳನ್ನು ಅಧಿಕೃತವಾಗಿ ರದ್ದುಗೊಳಿಸಿದರು. ಈ ಘೋಷಣೆಯಿಂದಾಗಿ ಬಹುತೇಕ ನಗದು ರೂಪದಲ್ಲಿ ವ್ಯವಹಾರ ನಡೆಸುತ್ತಿದ್ದ ಭಾರತದಂತಹ ದೇಶದಲ್ಲಿ ಶೇ.86ರಷ್ಟು ನೋಟುಗಳು ಅಮಾನ್ಯೀಕರಣಗೊಂಡವು. ಇದರಿಂದಾಗಿ ದೇಶದ ತುಂಬೆಲ್ಲಾ ಭೀಕರ ಅವ್ಯವಸ್ಥೆ ಮತ್ತು ಅರಾಜಕತೆಗಳು ಉಂಟಾಗಿದ್ದು ಅದರ ದುಷ್ಪರಿಣಾಮಗಳನ್ನು ಇಂದೂ ಸಹ ಜನರು ಎದುರಿಸುತ್ತಿದ್ದಾರೆ. ದೇಶದ ಜನರಿಗೆ ಮತ್ತು ದೇಶದ ಆರ್ಥಿಕತೆಗೆ ತೀವ್ರ ತೊಂದರೆ ಉಂಟು ಮಾಡಿದ ಅಪಾಯಕಾರಿ ನೋಟು ಅಮಾನ್ಯೀಕರಣ ಪ್ರಯೋಗದ ಕುರಿತಂತೆ ನಮಗೆ ಸರಕಾರದಿಂದ ನಿರುಪಯೋಗಿ ಸ್ಪಷ್ಟನೆಗಳು ಬೇಕಾಗಿಲ್ಲ. ಈ ಪ್ರಕ್ರಿಯೆಯ ವೇಳೆ ಉಂಟಾದ ಸಾವು ನೋವುಗಳು ನಿಜಕ್ಕೂ ಖೇದಕರವಾಗಿದೆ. ಈ ವಿವೇಚನಾರಹಿತವಾದ ನೋಟ್ ಬ್ಯಾನ್‍ನಿಂದ ಉಂಟಾದ ದುಷ್ಪರಿಣಾಮಗಳನ್ನು ಸಾವು ನೋವುಗಳನ್ನು ಗುರುತಿಸಿ ಅದಕ್ಕೆ ನೊಂದ ಕುಟುಂಬಗಳಿಗೆ ಪರಿಹಾರ ಕೊಡಿಸಬೇಕು. ಈ ಬಗ್ಗೆ ನೀವು ವಹಿಸುವ ಹಸ್ತಕ್ಷೇಪವು ನಿಮ್ಮನ್ನು ಜನರೆಲ್ಲಾ ಭಾರತದ ಹೆಮ್ಮೆಯ ರಾಷ್ಟ್ರಪತಿ ಎಂದು ನೆನಪಿಡುವಂತೆ ಮಾಡುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.  

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ವಿಠಲ್ ನಾಯ್ಕ, ಮುಖಂಡರಾದ ರಾಮಮೋಗೇರ್, ಜಾಲಿ. ಪಟ್ಟಣಪಂಚಾಯತ್ ಅಧ್ಯಕ್ಷ ಅಬ್ದುಲ್ ರಹೀಮ್ ಶೇಖ್, ವಿಷ್ಣುದೇವಾಡಿಗ, ಸೈಯ್ಯದ್ ಅಲಿ, ತಾ.ಪಂ ಅಧ್ಯಕ್ಷ ಈಶ್ವರ ಬಿಳಿಯಾ ನಾಯ್ಕ ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು.(¥

Read These Next

ಕಾರವಾರ: ಸಾರ್ವಜನಿಕರಿಗೆ ಕರಪತ್ರ ವಿತರಿಸಿ ಮತದಾನ ಜಾಗೃತಿ ಮೂಡಿಸಿದ ಜಿಲ್ಲಾಧಿಕಾರಿ

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮೇ 7 ರಂದು ನಡೆಯಲಿರುವ ಸಾರ್ವತ್ರಿಕ ಲೋಕಸಭಾ ಚುನಾವಣೆಯ ಪ್ರಯುಕ್ತ , ಸಾರ್ವಜನಿಕರು ಹೆಚ್ಚಿನ ...