ಭಟ್ಕಳ: ಭಟ್ಕಳದ ಇಸ್ಲಾಮಿಯಾ ಆಂಗ್ಲೋ ಉರ್ದು ಹೈಸ್ಕೂಲ್ (ಐಯುಎಎಚ್ಎಸ್) ಇದರ ವಾರ್ಷಿಕ ಸಾಹಿತ್ಯ ಸ್ಪರ್ಧೆಯು ಶನಿವಾರ ಉಸ್ಮಾನ್ ಹಸನ್ ಸಭಾಂಗಣದಲ್ಲಿ ಜರುಗಿತು.
ಸ್ಪರ್ಧೆಯಲ್ಲಿ ಕಂಠಪಾಠ, ನಾತ್, ಗಜಲ್ ಸೇರಿದಂತೆ ಉರ್ದು, ಇಂಗ್ಲಿಷ್ ಮತ್ತು ಕನ್ನಡ ಭಾಷಣ ಸ್ಪರ್ದೆ ನಡೆಸಲಾಯಿತು.
ಅಂಜುಮನ್ ಸಂಸ್ಥೆಯ ಉಪಾಧ್ಯಕ್ಷರಾದ ಸೈಯದ್ ಸಮೀರ್ ಸಕ್ಕಾಫ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಅಸಾಧಾರಣ ಪ್ರಯತ್ನವನ್ನು ಶ್ಲಾಘಿಸಿ ಸಂತಸ ವ್ಯಕ್ತಪಡಿಸಿದರು.
ಅತಿಥಿಯಾಗಿ ಆಗಮಿಸಿದ್ದ ಮೌಲಾನಾ ಮುಹಮ್ಮದ್ ಫಯಾಜ್ ಮೌಲ್ವಿ (ಮೋತಿಯಾ) ಅವರು ಮಾತನಾಡಿ, ಶಿಕ್ಷಕರನ್ನು ಗೌರವಿಸುವುದು, ನೈತಿಕ ಮೌಲ್ಯಗಳನ್ನು ಸುಧಾರಿಸುವುದು, ಸೌಹಾರ್ದತೆಯನ್ನು ಬೆಳೆಸುವುದು ಮತ್ತು ದಯೆಯನ್ನು ಅಭ್ಯಾಸ ಮಾಡುವುದು ಪ್ರಪಂಚದ ಯಶಸ್ಸಿಗೆ ಅಗತ್ಯವಾದ ಅಂಶಗಳ ಮಹತ್ವವನ್ನು ಎತ್ತಿ ತೋರಿಸುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಂಜುಮನ್ ಸಂಸ್ಥೆಯ ಅಧ್ಯಕ್ಷ ಖಾಜಿಯಾ ಮುಹಮ್ಮದ್ ಮುಝಾಮಿಲ್ ವಹಿಸಿದ್ದರು. ಸಂಸ್ಥೆಯ ಉಪಾಧ್ಯಕ್ಷ ಮುಹಮ್ಮದ್ ಸಾದಿಕ್ ಪಿಳ್ಳೋರ್, ಶಾಲಾ ಆಡಳಿತ ಮಂಡಳಿ ಕಾರ್ಯದರ್ಶಿ ಸಾದುಲ್ಲಾ ರುಕ್ನುದ್ದೀನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
IAUHS ನ ಮುಖ್ಯೋಪಾಧ್ಯಾಯ ಶಬೀರ್ ದಫದಾರ್ ಅವರು ಅತಿಥಿಗಳನ್ನು ಆತ್ಮೀಯವಾಗಿ ಸ್ವಾಗತಿಸಿದರು. ಅತಿಥಿಗಳನ್ನು IAUHS ನ ಶಿಕ್ಷಕರಾದ ಅಬ್ದುಲ್ ಹಫೀಜ್ ಖಾನ್ ನದ್ವಿ ಪರಿಚಯಿಸಿದರು. IAUHS ಮುಖ್ಯೋಪಾಧ್ಯಾಯರಾದ ಅಬ್ದುಲ್ ನಾಸಿರ್ ಖಾನ್ ಧನ್ಯವಾದ ಸಲ್ಲಿಸಿದರು.