ಕರ್ನಾಟಕದ ಐವರು ಪರಿಶಿಷ್ಟ ಯುವತಿಯರ ಸಾಹಸದ ಚಾರಣ..

Source: SO News | By Laxmi Tanaya | Published on 22nd October 2021, 9:20 PM | National News | Special Report |

ಕಾರವಾರ : ರಾಜ್ಯದ ಐವರು ಯುವತಿಯರು ಹಿಮಾಲಯದ ಪರ್ವತ ಏರಿ, ಸಾವಿರಾರು ಕಿ.ಮೀ ಸೈಕ್ಲಿಂಗ್ ಮಾಡಿ ಬಳಿಕ ಅರಬ್ಬಿ ಸಮುದ್ರದಲ್ಲಿ ಕಯಾಕಿಂಗ್ ನಡೆಸುವ ಮೂಲಕ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾರೆ.

ಮೈಸೂರಿನ ಬಿಂದು ಎನ್ (25)ನಾಯಕತ್ವದಲ್ಲಿ, ಶಿವಮೊಗ್ಗದ ಐಶ್ವರ್ಯಾ ವಿ(19), ಧನಲಕ್ಷ್ಮೀ(22), ಬೆಂಗಳೂರಿನ ಆಶಾ ವೈ(20),  ಕೊಡಗಿನ ಪುಷ್ಪಾ ಎಸ್ ಎಂ(23) ಸರ್ಕಾರದ ಎಸ್‌ಸಿಪಿ,ಟಿಎಸ್‌ಪಿ ಅನುದಾನದಲ್ಲಿ  ಇಂಡಿಯನ್ ಮೌಂಟೇನಿಯರಿಂಗ್ ಫೌಂಡೇಶನ್, ಜನರಲ್ ತಿಮ್ಮಯ್ಯ ಸಾಹಸ ಅಕಾಡೆಮಿ ಸಹಕಾರದೊಂದಿಗೆ  `ಶಿಖರದಿಂದ ಸಾಗರದವರೆಗೆ' ಎಂಬ ಸಾಹಸಿ ಅಭಿಯಾನದಲ್ಲಿ ಸಾಧನೆ ಮಾಡಿದವರಾಗಿದ್ದಾರೆ.

ಕಾರವಾರಕ್ಕೆ ಆಗಮಿಸಿದ ಅವರನ್ನ ಜಿಲ್ಲಾಡಳಿತದಿಂದ ಹಾರ್ದಿಕವಾಗಿ ಬರಮಾಡಿಕೊಳ್ಳಲಾಯಿತು. ಶಿಖರದಿಂದ ಸಾಗರದವರೆಗೆ ಚಾರಣ ಸಾಹಸಕ್ಕೆ ಐವರು ಮುಂದಾಗಿದ್ದಾರೆ. ಅಗಸ್ಟ್ 22ಕ್ಕೆ  ಕಾಶ್ಮೀರದ 5425 ಮೀಟರ್ ಎತ್ತರದ ಕೊಲೈಪಿಕ್ ಎಂಬ  ಹಿಮಪರ್ವತವನ್ನು ಏರಿ ಸಾಹಸ ಮಾಡಿದ್ದಾರೆ. ಸಪ್ಟೆಂಬರ್ ನಾಲ್ಕರಂದು ಲಡಾಕ್ ನಿಂದ ಸೈಕಲ್ ಪ್ರಯಾಣ ಆರಂಭಿಸಿ ಕಾರವಾರದವರೆಗೆ 3350 ಕಿಲೋಮೀಟರ್ ಕ್ರಮಿಸಿ ಬಂದಿದ್ದಾರೆ. 

ಇದೀಗ ಅರಬ್ಬಿಸಮುದ್ರದಲ್ಲಿ ಕಾರವಾರದಿಂದ ಮಂಗಳೂರಿನ ಉಳ್ಳಾಲವರೆಗೆ ಕಯಾಕಿಂಗ್ ಮಾಡಲು ಮುಂದಾಗಿದ್ದಾರೆ. 

'ತಾವು  ಸಾಹಸಯಾನ ಕೈಗೊಳ್ಳುವುದಕ್ಕೆ ಆರಂಭದಲ್ಲಿ ಮನೆಯವರು ಒಪ್ಪಿರಲಿಲ್ಲ.  ಹಿಮದಿಂದಾವೃತವಾದ  ಪರ್ವತಾರೋಹಣದಲ್ಲಿ ಉಸಿರಾಟದ ಸಮಸ್ಯೆ ಉಂಟಾಗಿ ಸಮಸ್ಯೆಯಾಗಿತ್ತು.  ಆದರೂ ಛಲ ಬಿಡದೆ ಗುರಿ ಮುಟ್ಟುವಲ್ಲಿ ಯಶಸ್ವಿಯಾಗಿದ್ದೇವೆ.  ಒಂದೊಂದು ದಿನ ಸುಮಾರು 200 ಕಿಲೋಮೀಟರ್ ಸೈಕ್ಲಿಂಗ್ ಮಾಡಿದ್ದೇವೆ.  ತುಂಬಾ ಸುಸ್ತಾದರೂ ಕೂಡ ನಾವೇ ಟೆಂಟ್ ಹಾಕಿ, ನಾವೇ ಅಡುಗೆ ಮಾಡಿ ತಿನ್ನಬೇಕಾಗಿತ್ತು. ಆದರೂ ಈ ಸಾಹಸದ  ಪ್ರಯಾಣ ನಮಗೆ ಅದ್ಭುತ ಅನುಭವ ನೀಡಿದೆ ಎಂದು ಯುವತಿಯರು ತಮ್ಮ ಅನುಭವ ಹೇಳಿದ್ದಾರೆ.

 ಕಾರವಾರಕ್ಕೆ ಬಂದ ಯುವತಿಯರನ್ನ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜಿಲ್ಲಾ ಪಂಚಾಯತ್ ಪ್ರಿಯಾಂಗ  ಸೈಕ್ಲಿಸ್ಟ್ಗಳಿಗೆ ಹಾರ ಹಾಕಿ ಸ್ವಾಗತಿಸಿದರು. ಅಲ್ಲದೇ ಯುವತಿಯರ ಸಾಧನೆಗೆ ಸಂತಸ ವ್ಯಕ್ತಪಡಿಸಿದ್ದಾರೆ. 

Read These Next

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...