ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಬುರುಡೆ ಫಾಲ್ಸ್ಗೆ ಈಜಲು ತೆರಳಿದ್ದ ಮೂವರು ಯುವಕರು ನೀರುಪಾಲಾದ ದುರ್ಘಟನೆ ಶನಿವಾರ ನಡೆದಿದೆ.
ನೀರುಪಾಲಾದ ಯುವಕರು ಸಿದ್ದಾಪುರ ಮೂಲದ ಅಭಿಶೇಕ ಶ್ರೀಕಾಂತ ನಾಯ್ಕ, ಶಿರಸಿದ ಮುರಳಿ ಮತ್ತು ಕೇರಳದ ಸಾಯಿಚಂದ್ರ ದನ್ವಂತರಿ ಎಂದು ಗುರುತಿಸಲಾಗಿದೆ.
ಕಾಲೇಜಿಗೆ ಇಂದು ರಜೆ ಇದ್ದಿದ್ದರಿಂದ ಮುರಳಿ, ಅಭಿಷೇಕ್ ಹಾಗೂ ಸಾಯಿ ಪ್ರವಾಸಕ್ಕೆ ಪ್ಲಾನ್ ಮಾಡಿಕೊಂಡಿದ್ದರು. ಹೀಗಾಗಿ ಕಾಲೇಜ್ನಿಂದ ಸುಮಾರು 35 ಕಿ.ಮೀ. ದೂರದ ಬುರುಡೆ ಪಾಲ್ಸ್ ಗೆ ಮಧ್ಯಾಹ್ನ ಬಂದಿದ್ದರು. ಬಳಿಕ ಈಜಲು ಹೋಗಿದ್ದಾಗ ಸುಳಿಗೆ ಸಿಲುಕಿ ನೀರು ಪಾಲಾಗಿದ್ದಾರೆ. ಸ್ಥಳದಲ್ಲಿಯೇ ಇದ್ದ ಕೆಲವರು ವಿದ್ಯಾರ್ಥಿಗಳು ನೀರುಪಾಲಾದ ದೃಶ್ಯವನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸರು ಸ್ಥಳಕ್ಕಾಗಮಿಸಿ ಶವಗಳನ್ನು ಮೇಲಕ್ಕೆತ್ತಿದ್ದಾರೆ. ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಸಲಾಗುತ್ತಿದೆ