ಕುಂದಾಪುರ, ಜೂನ್ ೨೩:ಹಿಂಸಾತ್ಮಕವಾಗಿ ಗೋವುಗಳನ್ನು ಸಾಗಾಟಮಾಡುತ್ತಿದ್ದ ವಾಹನ ಸಮೇತ ಚಾಲಕರನ್ನು ಪೊಲೀಸರು ಪತ್ತೆ ಹಚ್ಚಿ ವಶಕ್ಕೆ ಪಡೆದ ಘಟನೆ ತಾಲೂಕಿನ ಪುರವರ್ಗದಲ್ಲಿ ಶುಕ್ರವಾರ ಬೆಳಿಗ್ಗೆ ಸಂಭವಿಸಿದೆ.
ಕುಂದಾಪುರ ತಾಲೂಕಿನ ಗುಲವಾಡಿಯ ತುಪ್ಪದಕಟ್ಟೆ ನಿವಾಸಿ ಆಶಿಕ್ ನಾಸೀರ್, ನೇರಳಕಟ್ಟೆ ನಿವಾಸಿ ಆದಿಲ್ ಇಬ್ರಾಹೀಮ್, ಭಟ್ಕಳ ಸಿದ್ದೀಖ ಸ್ಟ್ರೀಟನ ನಿವಾಸಿ ಮಹ್ಮದ್ ಇಬ್ರಾಹೀಂ ಇವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಎಲ್ಲಿಂದಲು ಕಳ್ಳತನ ಮಾಡಿದ 15 ದನಕರುಗಳನ್ನು ವಾಹನದಲ್ಲಿ ಹಿಂಸಾತ್ಮಕವಾಗಿ ಸಾಗಾಟಮಾಡುತ್ತಿದ್ದರು. ಅವುಗಳಿಗೆ ಹಿಂಸೆಯಾಗುವ ಹಾಗೆ ಕಟ್ಟಿ ಮೇವು ನೀಡದೆ, ಯಾವುದೆ ಪರವಾನಿಗೆ ಇಲ್ಲದೆ ಸಾಗುಸುತ್ತಿರುವಾಗ ಸಿಪಿಐ ಪ್ರಶಾಂತ ನಾಯಕ ಮಾರ್ಗದರ್ಶನದಲ್ಲಿ ಪಿಎಸ್ಐ ಪರಮೇಶ್ವರ ಸೇತ ಸನದಿ ಇವರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.