ಕಾರವಾರ ಆಗಸ್ಟ್ 30: ಸ್ವಚ್ಛ ಸಂಕಲ್ಪ ಮೂಲಕ ಸ್ವಚ್ಛ ಸಿದ್ಧಿ ಕಾರ್ಯಕ್ರಮದಡಿ ಉತ್ತರ ಕನ್ನಡ ಜಿಲ್ಲಾದ್ಯಂತ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಕೆ.ಚಂದ್ರಶೇಖರ ನಾಯಕ ತಿಳಿಸಿದ್ದಾರೆ.
ರಾಷ್ಟ್ರದಲ್ಲಿ ನೈರ್ಮಲ್ಯ ಮತ್ತು ಜನಾರೋಗ್ಯ ಕ್ಷೇತ್ರದಲ್ಲಿ ರಾಷ್ಟ್ರವು ಎದುರಿಸುತ್ತಿರುವ ತೀವ್ರ ಸಮಸ್ಯೆಗಳಿಗೆ ಸಾರ್ವಜನಿಕರಿಂದ ಸಲಹೆ, ಮಾರ್ಗದರ್ಶನ ಹಾಗೂ ಪರಿಹಾರಗಳನ್ನು ಕಂಡುಕೊಳ್ಳುವ ಉದ್ದೇಶದಿಂದ ಈ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ಪ್ರಬಂಧ ಸ್ಪರ್ಧೆ, ಕಿರುಚಿತ್ರ ಸ್ಪರ್ಧೆ ಹಾಗೂ ಬಣ್ಣದ ಚಿತ್ರ ಬಿಡಿಸುವ ಸ್ಪರ್ಧೆಗಳನ್ನು ಮೂರು ಹಂತಗಳಲ್ಲಿ ಆಯೋಜಿಸಲಾಗಿದೆ ಎಂದು ಅವರು ತಿಳಿಸಿದರು.
2017 ಸೆಪ್ಟೆಂಬರ್ 3 ಮತ್ತು 4ರಂದು `ಸ್ವಚ್ಛ ಭಾರತಕ್ಕೆ ನಾನು ಏನು ಮಾಡಬೇಕು’ ಎಂಬ ಶೀರ್ಷಿಕೆಯಡಿ ಎಲ್ಲ ಶಾಲಾ ಕಾಲೇಜುಗಳಲ್ಲಿ ಪ್ರಬಂಧ ಸ್ಪರ್ಧೆ ಆಯೋಜಿಸಲಾಗುವುದು. ಈ ಎಲ್ಲ ಪ್ರಬಂಧಗಳನ್ನು ಸೆಪ್ಟೆಂಬರ್ 5ರಂದು ಕೇಂದ್ರ ಸರ್ಕಾರದ www.mygov.in ವೆಬ್ಸೈಟ್ನಲ್ಲಿ ಇಂದೀಕರಿಸಲಾಗುವುದು. ಪ್ರಬಂಧವು ಗರಿಷ್ಠ 250 ಪದಗಳನ್ನು ಮೀರಿರಬಾರದು ಎಂದರು.
`ಸ್ವಚ್ಛ ಭಾರತ ನನ್ನ ಕನಸು’ ಶೀರ್ಷಿಕೆಯಡಿ ಸೆಪ್ಟೆಂಬರ್ 5 ಮತ್ತು 6ರಂದು ಎಲ್ಲಾ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಬಣ್ಣದ ಚಿತ್ರ ಬಿಡಿಸುವ ಸ್ಪರ್ಧೆಗಳನ್ನು ಆಯೋಜಿಸಲಾಗುವುದು. ಇದರಲ್ಲಿ 1ರಿಂದ 5ನೇ ತರಗತಿ ಮಕ್ಕಳು ಭಾಗವಹಿಸಲಿದ್ದು, ಸಂಬಂಧಿಸಿದ ಶಾಲಾ ಮುಖ್ಯೋಪಧ್ಯಾಯರು ಬಣ್ಣದ ಚಿತ್ರಗಳನ್ನು ಹಾಗೂ ಪ್ರಬಂಧಗಳನ್ನು ಶೇಖರಿಸಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಯವರಿಗೆ ಸಲ್ಲಿಸಲಿದ್ದಾರೆ ಎಂದು ಹೇಳಿದರು.
ಅಂತೆಯೇ, `ಭಾರತದ ಸ್ವಚ್ಛತೆಗೆ ನನ್ನ ಕೊಡುಗೆ’ ಶೀರ್ಷಿಕೆಯಡಿ ಸೆಪ್ಟೆಂಬರ್ 5ರೊಳಗೆ ಪ್ರತಿ ಗ್ರಾಮ ಪಂಚಾಯ್ತಿಯಿಂದ ಕಿರುಚಿತ್ರಗಳ ಸ್ಪರ್ಧೆಗಳನ್ನು ಆಯೋಜಿಸಲಾಗುವುದು. ಪ್ರತಿ ಕಿರುಚಿತ್ರದ ಗರಿಷ್ಠ ಅವಧಿ 2ರಿಂದ 3 ನಿಮಿಷ ಮೀರಿರಬಾರದು. ಇದರಲ್ಲಿ ಕನಿಷ್ಠ ಒಂದು ಪ್ರಬಂಧ ಹಾಗೂ ವಿಡಿಯೋ ಕಿರುಚಿತ್ರವನ್ನು ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ತಾಲೂಕು ಪಂಚಾಯ್ತಿಗೆ ಸಲ್ಲಿಸಬೇಕು. ಸೆ.7ರೊಳಗೆ ಎಲ್ಲ ವಿಡಿಯೋಗಳನ್ನು ಕೇಂದ್ರ ಸರ್ಕಾರದ ವೆಬ್ಸೈಟ್ www.mygov.in ಇಲ್ಲಿ ಇಂಧೀಕರಿಸಲಾಗುವುದು.
ಈ ಎಲ್ಲ ಪ್ರಕ್ರಿಯೆಯಲ್ಲಿ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಶಿಕ್ಷಕರು, ಅಧ್ಯಾಪಕರು, ವೃತ್ತಿಪರರು, ಜನಪ್ರತಿನಿಧಿಗಳು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಶಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರು ಭಾಗವಹಿಸುವಂತೆ ಅವರು ತಿಳಿಸಿದ್ದಾರೆ.
Read These Next
ಸೋಮವಾರದ ಒಳಗೆ ಬರ ಪರಿಹಾರ ಬಿಡುಗಡೆ ಮಾಡಲು ಒಪ್ಪಿದ ಕೇಂದ್ರ ಸರ್ಕಾರ
ನವದೆಹಲಿ/ಬೆಂಗಳೂರು: ಕರ್ನಾಟಕಕ್ಕೆ ಸೋಮವಾರದ ಏಪ್ರಿಲ್ 29ರ ಒಳಗೆ ಬರ ಪರಿಹಾರ ಬಿಡುಗಡೆ ಮಾಡುತ್ತೇವೆ ಎಂದು ಕೇಂದ್ರ ಸರ್ಕಾರ ...
ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...
ಇವಿಎಂ - ವಿವಿಪ್ಯಾಟ್ ಮತ ಪರಿಶೀಲನೆ ತೀರ್ಪು ಕಾದಿರಿಸಿದ ಸುಪ್ರೀಂಕೋರ್ಟ್
ಇಲೆಕ್ಟ್ರಾನಿಕ್ ಮತಯಂತ್ರ (ಇವಿಎಂ)ದ ಮೂಲಕ ಚಲಾಯಿತವಾದ ಮತಗಳನ್ನು ವಿವಿಪ್ಯಾಟ್ ಯಂತ್ರದಲ್ಲಿ ದಾಖಲಾದ ಸ್ಲಿಪ್;ಗಳ ಜೊತೆ ತಾಳೆ ಹಾಕುವ ...
ಅಣಕು ಮತದಾನದ ವೇಳೆ ಬಿಜೆಪಿಗೆ ಮತ
ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...
ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್
ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...
ಇಂದು ಮೊದಲ ಹಂತದ ಚುನಾವಣೆ; ದೇಶಾದ್ಯಂತ 102 ಕ್ಷೇತ್ರಗಳಿಗೆ ಮತದಾನ
ಪ್ರಜಾಪ್ರಭುತ್ವದ ಹಬ್ಬಕ್ಕೆ ಭಾರತ ಸಜ್ಜಾಗಿದ್ದು ಮೊದಲ ಹಂತದ ಲೋಕಸಭಾ ಚುನಾವಣೆ ಶುಕ್ರವಾರ ನಡೆಯಲಿದೆ. 21 ರಾಜ್ಯಗಳು, ಕೇಂದ್ರಾಡಳಿತ ...
“ಬೋಧನಾ ಪ್ರಬುದ್ಧತೆ, ಪ್ರತಿಭಾ ಪೋಷಣೆ, ಸಮಾಜಿಕ ಬದಲಾವಣೆ”-ಐಟಾ ದಿಂದ ರಾಷ್ಟ್ರೀಯ ಶೈಕ್ಷಣಿಕ ಅಭಿಯಾನ
ಬೋಧನಾ ಪ್ರಬುದ್ಧತೆ, ಪ್ರತಿಭಾ ಪೋಷಣೆ ಮತ್ತು ಸಮಾಜಿಕ ಬದಲಾವಣೆ ಈ ಮೂರು ಅಂಶಗಳು ಪರಸ್ಪರ ಸಂಬಂಧ ಹೊಂದಿವೆ. ಬೋಧನಾ ಪ್ರಬುದ್ಧತೆಯು ...
ರಮಝಾನ್ ವಿಶೇಷ ಲೇಖನ; ಮಾನವ ಕಳಕಳಿಯ ಹಬ್ಬ “ಈದುಲ್ ಫಿತ್ರ್”
ಇಸ್ಲಾಮಿನಲ್ಲಿ ಕೇವಲ ಎರಡು ಹಬ್ಬಗಳು ಮಾತ್ರ ಇರುವುದು. ಒಂದನೆಯದು 30ದಿನಗಳ ಉಪವಾಸದ ನಂತರ ಆಚರಿಸುವ ಈದುಲ್ ಫಿತ್ರ್ ಮತ್ತು ಎರಡನೆಯದು ...
ವಲಸೆ ಕಾರ್ಮಿಕರ ರೈಲು ಪ್ರಯಾಣ ದರವನ್ನು PM CARES ಇಂದ ಭರಿಸಬಾರದೇಕೆ?
ಒಂದನೇ ಲಾಕ್ಡೌನಿಗೆ ಮುಂಚೆಯೇ ಸರ್ಕಾರ ವು ವಲಸೆ ಕಾರ್ಮಿಕರ ನ್ನು ಅವರವರ ಊರು ಸೇರಲು ಅವಕಾಶ ಕಲ್ಪಿಸಿ ನಂತರ ಲಾಕ್ ಡೌನ್ ...
ಮಹೇಂದ್ರ ಕುಮಾರ್ ಬಗ್ಗೆ ದಿನೇಶ ಅಮೀನ್ ಮಟ್ಟೂ ಏನು ಹೇಳುತ್ತಾರೆ-ಇಲ್ಲಿದೆ ಮಾಹಿತಿ
ಅದನ್ನು ನಾನು ನೋಡಬಾರದಿತ್ತು. ನಿಮ್ಮ ಶಾಂತ ಮುಖಚರ್ಯೆಗಿಂತಲೂ ಆ ಕಣ್ಣೀರಿನ ಮುಖಗಳು ನನ್ನನ್ನು ಕಾಡುತ್ತಿವೆ, ಬಹುಷ: ನಾನು ...
ಗೆಳೆಯ ಮಹೇಂದ್ರ ಕುಮಾರ್.... ಅಂತಿಮ ನಮನಗಳು......
ನಂಬಲಾಗುತ್ತಿಲ್ಲ....ನಮ್ಮ ಸಮಾಜಕ್ಕೆ ನೀವು ಹಿಂದೆಂದಿಗಿಂತಲೂ ಹೆಚ್ಚು ಅಗತ್ಯ ವಾಗಿದ್ದಾಗ ಹೀಗೇಕೆ ದಿಢೀರನೆ ನಿರ್ಗಮಿಸಿದಿರಿ?
ಜನಪರ ಕಾಳಜಿಯ ಹೋರಾಟಗಾರ ಮಹೇಂದ್ರಕುಮಾರ್ ಈಗ ಒಂದು ನೆನಪು ಮಾತ್ರ
ಬಲಪಂಥೀಯ ವಿಚಾರಧಾರೆ ಅದರಲ್ಲೂ ಭಜರಂಗದಳ ಎಂದರೆ ಒಂದು ಕಾಲದಲ್ಲಿ ಮಹೇಂದ್ರ ಕುಮಾರ್ ಎಂಬಷ್ಟರ ಮಟ್ಟಿಗೆ ಭಜರಂಗದಳವನ್ನು ಬೆಳೆಸಿದ್ದ ...