ದುಬೈ, : ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು 41-17 ಅಂಕಗಳ ಅಂತರದಿಂದ ಮಣಿಸಿದ ವಿಶ್ವ ಚಾಂಪಿಯನ್ ಭಾರತ ತಂಡ ಕಬಡ್ಡಿ ಮಾಸ್ಟರ್ಸ್ನಲ್ಲಿ ಸೆಮಿ ಫೈನಲ್ಗೆ ಲಗ್ಗೆ ಇಟ್ಟಿದೆ.
ಸೋಮವಾರ ನಡೆದ ಪಂದ್ಯದಲ್ಲಿ ಸ್ಟಾರ್ ರೈಡರ್ಗಳು ಹಾಗೂ ಡಿಫೆಂಡರ್ಗಳ ದಿಟ್ಟ ಪ್ರದರ್ಶನ ನೆರವಿನಿಂದ ಭಾರತ ತಂಡ ಪಾಕ್ ವಿರುದ್ಧ ಸುಲಭ ಜಯ ದಾಖಲಿಸಿತು.
ನಾಯಕ ಅಜಯ್ ಠಾಕೂರ್ ಅವರು ರೋಹಿತ್ ಕುಮಾರ್ ಹಾಗೂ ಮೋನು ಗೊಯತ್ ಜೊತೆಗೂಡಿ ರೈಡ್ ಪಾಯಿಂಟ್ಸ್ ಪಡೆದು ಭಾರತಕ್ಕೆ ಭರ್ಜರಿ ಜಯ ತಂದುಕೊಟ್ಟರು. 23ನೇ ನಿಮಿಷದಲ್ಲಿ ರೈಡ್ನಲ್ಲಿ 2 ಅಂಕ ಗಳಿಸಿದ ಕನ್ನಡಿಗ ರಿಶಾಂಕ್ ದೇವಾಡಿಗ ಭಾರತಕ್ಕೆ 20-11 ಲೀಡ್ ಒದಗಿಸಿಕೊಟ್ಟರು. 32ನೇ ನಿಮಿಷದಲ್ಲಿ 13-30 ಹಿನ್ನಡೆಯಲ್ಲಿದ್ದ ಪಾಕ್ ಮತ್ತೆ ಚೇತರಿಸಿಕೊಳ್ಳಲಿಲ್ಲ.