ಭಟ್ಕಳ: ಇಲ್ಲಿನ ಕಾರಗದ್ದೆಯ ಗುಡ್ಲಕ್ ರಸ್ತೆಯ 2ನೇ ಕ್ರಾಸ್ನ ಮಸೀದಿಯಿಂದ ನಮಾಜು ಮುಗಿಸಿ ರಾತ್ರಿ 8 ಗಂಟೆಯ ಸುಮಾರಿಗೆ ಮನೆಗೆ ಹೋಗುವಾಗ ತನ್ನ ಕೈಯಲ್ಲಿದ್ದ ಹಣವನ್ನು ಕಳೆದುಕೊಂಡು ಹುಡುಕುತ್ತಿರುವ 12 ವರ್ಷದ ಬಾಲಕನೋರ್ವನನ್ನು ಬಲಾತ್ಕಾರದಿಂದ ಕರೆದುಕೊಂಡು ಹೋಗಿ ಅನೈಸರ್ಗಿಕ ಲೈಂಗಿಕ ಕ್ರಿಯೆಗೆ ಬಳಸಿಕೊಂಡಿರುವ ಕುರಿತು ತಡವಾಗಿ ಬೆಳಕಿಗೆ ಬಂದಿದೆ.
ಪಟ್ಟಣದ ವ್ಯಾಪ್ತಿಯ ಗುಡ್ಲಕ್ ರಸ್ತೆಯ ನಿವಾಸಿ ಅಬ್ದುಲ್ ದಯೀಮ್ ಫಕ್ಕರ್ಡೆ ಎನ್ನುವವನೇ ಬಾಲಕನನ್ನು ಬಲಾತ್ಕಾರವಾಗಿ ಎಳೆದುಕೊಂಡು ಹೋಗಿ ಹತ್ತಿರದಲ್ಲಿಯೇ ನಿರ್ಮಾಣ ಹಂತದಲ್ಲಿರುವ ಮನೆಯೊಂದಕ್ಕೆ ಕರೆದುಕೊಂಡು ಹೋಗಿ ಆತನನ್ನು ಸಲಿಂಗ ಕಾಮಕ್ಕೆ ಬಳಸಿಕೊಂಡಿದ್ದಲ್ಲದೇ ಜೀವ ಬೆದರಿಕೆಯನ್ನು ಹಾಕಿದ್ದು ಈ ಕುರಿತು ಆತನ ಅಜ್ಜಿ ಇಲ್ಲಿನ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನನ್ವಯ ಆರೋಪಿಯ ಮೇಲೆ ಪೋಸ್ಕೋ ಕಾಯಿದೆಯಡಿಯಲ್ಲಿ ದೂರು ದಾಖಲಿಸಿಕೊಂಡು ಬಂಧಿಸಿ ಕಾರವಾರದ ಜೈಲಿಗೆ ಕಳುಹಿಸಲಾಗಿದೆ.
ಮನೆಯಿಂದ ಹೊರಟ ಬಾಲಕನ ಕೈಯಲ್ಲಿ ಆತನ ಅಜ್ಜಿ 40 ರೂಪಾಯಿಗಳನ್ನು ಕೊಟ್ಟಿದ್ದು ನಮಾಜಿಗೆ ಹೋಗಿ ಬರುವಾಗ ಹಣವನ್ನು ಎಲ್ಲಿಯೋ ಕಳೆದುಕೊಂಡಿದ್ದ ಬಾಲಕ ಕತ್ತಲೆಯಲ್ಲಿ ಹುಡುಕುತ್ತಿರುವುದನ್ನು ಕಂಡ ಆರೋಪಿ ತಕ್ಷಣ ಆತನ ಬಾಯಿಗೆ ಕೈಯಿಂದ ಮುಚ್ಚಿ ಎಳೆದುಕೊಂಡು ಹೋದನೆನ್ನಲಾಗಿದೆ. ಹತ್ತಿರದಲ್ಲಿಯೇ ನಿರ್ಮಾಣ ಹಂತದಲ್ಲಿರುವ ಮನೆಯ ಆವರಣಕ್ಕೆ ಕರೆದುಕೊಂಡು ಹೋಗಿ ಖುಲ್ಲಾ ಜಾಗಾದಲ್ಲಿ ಈತನನ್ನು ಬಳಸಿಕೊಂಡು ಅನೈಸರ್ಗಿಕ ಲೈಂಗಿಕ ಕ್ರಿಯೆ ನಡೆಸಿದ್ದಲ್ಲದೇ ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಜೀವ ಬೆದರಿಕೆಯನ್ನು ಹಾಕಿದ್ದಾನೆನ್ನಲಾಗಿದೆ. ಭಯದಿಂದ ಮನೆಯಲ್ಲಿ ಯಾರಿಗೂ ಹೇಳದೇ ಯಾತನೆ ಪಡುತ್ತಿರುವ ಹುಡುಗನನ್ನು ನೋಡಿ ಮನೆಯವರು ಸಂಶಯಗೊಂಡು ಮತ್ತೆ ಮತ್ತೆ ಕೇಳಿದಾಗ ನಡೆದ ಸಂಗತಿಯನ್ನು ವಿವರಿಸಿದ ಬಾಲಕ ಆರೋಪಿಯ ಪತ್ತೆಯನ್ನು ಸಹ ಹೇಳಿದನೆನ್ನಲಾಗಿದೆ.
ತಕ್ಷಣ ರಾತ್ರಿಯೇ ಗ್ರಾಮೀಣ ಠಾಣೆಗೆ ಬಂದು ಬಾಲಕನ ಅಜ್ಜಿ ದೂರು ನೀಡಿದ್ದಾರೆ. ದೂರನ್ನು ಸ್ವೀಕರಿಸಿದ ಪೊಲೀಸರು ತಕ್ಷಣ ಕಾರ್ಯಾಚರಣೆಯನ್ನು ನಡೆಸಿ ಆರೋಪಿಯನ್ನು ಬಂಧಿಸಲು ಯಶಸ್ವಿಯಾಗಿದ್ದು ಪೊಲೀಸರ ಸಕಾಲಿಕ ಕ್ರಮ ಪ್ರಶಂಸಗೆ ಕಾರಣವಾಗಿದೆ.
Read These Next
ಸಾವಿಷ್ಕಾರ್ ಫೆಸ್ಟ್; ಅಂಜುಮನ್ ವಿದ್ಯಾರ್ಥಿಗಳು ಚಾಂಪಿಯನ್
ಭಟ್ಕಳ: ಅಂಜುಮನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್ಮೆಂಟ್ ವಿದ್ಯಾರ್ಥಿಗಳಾದ ಮೊಹಮ್ಮದ್ ಇಸ್ಮಾಯಿಲ್ (4ನೇ ವರ್ಷದ ...
ಐಸಿಎಸ್ಇ ಪರೀಕ್ಷೆಯಲ್ಲಿ ವಿದ್ಯಾಂಜಲಿ ಶಾಲೆಯ ಸಾಧನೆ
ಶಾಲೆಯ ವಿದ್ಯಾರ್ಥಿಗಳಾದ ಅನುಷ್ಕಾ ನಾಗರಾಜ ದೇಶಭಂಡಾರಿ 94.80%, ಪೂರ್ಣಿಮಾ ಭೋಸಲೆ 94.60%, ಶಮಂತ್ ಕುಮಾರ ನಾಯ್ಕ 91.60%, ಅವನಿ ಶ್ರೀನಿವಾಸ ಪಡಿಯಾರ ...
ಐ.ಸಿ.ಎಸ್.ಇ ೧೦ನೇ ತರಗತಿ ಫಲಿತಾಂಶ ಪ್ರಕಟ; ನ್ಯೂ ಶಮ್ಸ್ ಸ್ಕೂಲ್ ಶೇ.೧೦೦ ಫಲಿತಾಂಶ
ಒಟ್ಟು ೮೫ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಎಲ್ಲ ವಿದ್ಯಾರ್ಥಿಗಳು ಉತ್ತೀರ್ಣಗೊಂಡಿದ್ದಾರೆ. ೨೮ ವಿದ್ಯಾರ್ಥಿಗಳು ಉನ್ನತ ...
ಕಾರವಾರ: ಸಾರ್ವಜನಿಕರಿಗೆ ಕರಪತ್ರ ವಿತರಿಸಿ ಮತದಾನ ಜಾಗೃತಿ ಮೂಡಿಸಿದ ಜಿಲ್ಲಾಧಿಕಾರಿ
ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮೇ 7 ರಂದು ನಡೆಯಲಿರುವ ಸಾರ್ವತ್ರಿಕ ಲೋಕಸಭಾ ಚುನಾವಣೆಯ ಪ್ರಯುಕ್ತ , ಸಾರ್ವಜನಿಕರು ಹೆಚ್ಚಿನ ...
ಕಾರವಾರ: ಮದವಣಗಿತ್ತಿಯಂತೆ ಕಂಗೊಳಿಸುತ್ತಿರುವ ಜಿಲ್ಲೆಯ ಮತಗಟ್ಟೆಗಳು
ಮತದಾನದ ದಿನವನ್ನು ಹಬ್ಬದಂತೆ ಆಚರಿಸಿ ಎನ್ನುವುದು ಚುನಾವಣಾ ಆಯೋಗದ ಆಶಯ. ಅದಕ್ಕೆ ಪೂರಕವಾಗಿ ಮತಗಟ್ಟೆಗಳಲ್ಲಿ ಮತದಾರರಿಗೆ ಯಾವುದೇ ...
ಭಟ್ಕಳ: ಮುರುಡೇಶ್ವರ ಸಮುದ್ರದಲ್ಲಿ ಇಬ್ಬರು ನಿರುಪಾಲು ಮತ್ತಿಬ್ಬರ ರಕ್ಷಣೆ
ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾದ ಮುರ್ಡೇಶ್ವರ ಸಮುದ್ರದಲ್ಲಿ ಇಬ್ಬರು ಯುವಕರು ಮುಳುಗಿ ಸಾವನ್ನಪ್ಪಿದ್ದಾರೆ, ಇದರಲ್ಲಿ ...